ಕರ್ನಾಟಕ

karnataka

ಉತ್ತರ ಕನ್ನಡ ಕಸಾಪ ಚುನಾವಣೆ : ಬಿ ಎನ್ ವಾಸರೆಗೆ ದಾಖಲೆಯ ಗೆಲುವು

By

Published : Nov 21, 2021, 7:51 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Kannada Sahitya Parishat Election) ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ ಅವರು 1573 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ..

Kannada Sahitya Parishat Election,BN Vasare
Kannada Sahitya Parishat Election

ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ (Kannada Sahitya Parishat Election) ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಿ ಎನ್ ವಾಸರೆ ಒಟ್ಟು 1,897 ಮತಗಳನ್ನು ಪಡೆದು ಗೆಲುವು ಪಡೆದರು. ವೇಣುಗೋಪಾಲ ಮದ್ಗೂಣಿ ಅವರು 324 ಮತ ಪಡೆಯುವ ಮೂಲಕ ಸೋಲನುಭವಿಸಿದರು. ಜಿಲ್ಲೆಯಲ್ಲಿ ಒಟ್ಟು 4,747 ಮತಗಳಿದ್ದು, ಅದರಲ್ಲಿ 2810 ಮತಗಳು ಚಲಾವಣೆಗೊಂಡಿದ್ದವು.

ಕಳೆದ ಭಾರಿ ಅರವಿಂದ ಕರ್ಕಿಕೋಡಿ ವಿರುದ್ಧ ಕೇವಲ 7 ಮತಗಳ ಅಂತರದಿಂದ ಕಸಾಪ ಚುನಾವಣೆಯಲ್ಲಿ ಪರಾಭವಗೊಂಡಿದ್ದ ವಾಸರೆ ಅವರು, ಈ ಬಾರಿ ದಾಖಲೆಯ ಅಂತರದ ಗೆಲುವು ದಾಖಲಿಸಿದ್ದಾರೆ.

ABOUT THE AUTHOR

...view details