ಕರ್ನಾಟಕ

karnataka

ಮಳೆ ಆರ್ಭಟಕ್ಕೆ ತತ್ತರಿಸಿದ ಕರಾವಳಿ ಜನ : ಮುಂದುವರಿದ ರಕ್ಷಣಾ ಕಾರ್ಯಾಚರಣೆ

By

Published : Jul 17, 2022, 3:32 PM IST

Karnataka Rain news.. ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ ಅಘನಾಶಿನಿ, ಶರಾವತಿ - ಉತ್ತರ ಕನ್ನಡದ ಹಲವು ಗ್ರಾಮಗಳು ಜಲಾವೃತ- ಜನರ ರಕ್ಷಣಾ ಕಾರ್ಯ ಚುರುಕು

heavy rain in Uttara Kannada
ಮಳೆ ಆರ್ಭಟಕ್ಕೆ ತತ್ತರಿಸಿದ ಕರಾವಳಿ ಜನ

ಕಾರವಾರ(ಉತ್ತರ ಕನ್ನಡ) : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಅಲ್ಲದೇ ಘಟ್ಟದ ಮೇಲ್ಭಾಗದಲ್ಲಿಯೂ ಅಧಿಕವಾಗಿ ಮಳೆ ಆಗುತ್ತಿರುವುದರಿಂದ ಕುಮಟಾ ಹೊನ್ನಾವರ ಭಾಗದಲ್ಲಿ ವ್ಯಾಪಕ ಅನಾಹುತ ಸೃಷ್ಟಿಯಾಗಿದೆ. ಅಘನಾಶಿನಿ, ಶರಾವತಿ ನದಿ ಹಾಗೂ ಇವುಗಳಿಗೆ ಸೇರುವ ಹೊಳೆಗಳಲ್ಲಿ ಯಥೇಚ್ಛವಾಗಿ ನೀರು ಹರಿದುಬರುತ್ತಿದೆ. ಕೆಲವು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ರಕ್ಷಣೆ ಕಾರ್ಯ ಮುಂದುವರೆದಿದೆ.

ಕುಮಟಾ ತಾಲೂಕಿ ಕೊನ್ನಳ್ಳಿ, ಊರಕೇರಿ, ಮೂರೂರು ಗ್ರಾಮದಲ್ಲಿ ಮನೆಗಳಗೆ ನುಗ್ಗಿದೆ. ಹೊನ್ನಾವರ ತಾಲೂಕಿನ ಮಾವಿನಕುರ್ವಾ, ಗುಂಡಬಾಳ, ಚಿಕ್ಕನಕೋಡ, ಹಡಿನಬಾಳ, ಗುಡ್ನಕಟ್ಟು ಗ್ರಾಮಗಳು ಮುಳುಗಡೆಯಾಗಿವೆ. ಈ ಪ್ರದೇಶದಲ್ಲಿ ಸಿಲುಕಿದವರನ್ನು ಎನ್​ಡಿಆರ್​ಎಫ್ ತಂಡ ರಕ್ಷಣೆ ಮಾಡುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಕದ್ರಾ ಜಲಾಶಯದ ಒಳ ಹರಿವು ಹೆಚ್ಚಿರುವ ಕಾರಣ ಎಲ್ಲಾ ಗೇಟ್​ಗಳನ್ನು ತೆರಯಲಾಗಿದೆ. ಸದ್ಯ ಮಳೆ ಮುಂದುವರಿದಲ್ಲಿ ಅಂಕೋಲಾ ಕಾರವಾರ ಭಾಗದಲ್ಲಿಯೂ ಆತಂಕ ಎದುರಾಗುವ ಭೀತಿ ಶುರುವಾಗಿದೆ.

ಇದನ್ನೂ ಓದಿ :ಮಡಿಕೇರಿ ಜಿಲ್ಲಾ ಕಚೇರಿ ತಡೆಗೋಡೆ ಕುಸಿತ: ಮಂಗಳೂರು ಸಂಪರ್ಕಿಸುವ ಹೆದ್ದಾರಿ ಬಂದ್

ABOUT THE AUTHOR

...view details