ಕರ್ನಾಟಕ

karnataka

ತುಮಕೂರು : ಕೆಎಸ್ಆರ್​ಟಿಸಿ ಬಸ್-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ.. ಗಂಡ-ಹೆಂಡತಿ ದುರ್ಮರಣ

By

Published : Mar 27, 2022, 7:42 PM IST

ಕೆಎಸ್ಆರ್​ಟಿಸಿ ಬಸ್​ ಮಧುಗಿರಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಧುಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ..

ksrtc-bus-bike-accident-in-tumkur
ಕೆಎಸ್ಆರ್​ಟಿಸಿ ಬಸ್​ - ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ

ತುಮಕೂರು :ಕೆಎಸ್ಆರ್​ಟಿಸಿ ಬಸ್​ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಗಂಡ-ಹೆಂಡತಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಬಳಿ ನಡೆದಿದೆ. ಸಾಂಬಾಶಿವಯ್ಯ (70), ಶಂಕರಮ್ಮ (60) ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮೃತರು ಮಧುಗಿರಿಯ ಗೊಂದಿಹಳ್ಳಿ ಮೂಲದ ನಿವಾಸಿಗಳು ಎಂದು ತಿಳಿದು ಬಂದಿದೆ. ಕೆಎಸ್ಆರ್​ಟಿಸಿ ಬಸ್​ ಮಧುಗಿರಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಧುಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಓದಿ:ರಾಜ್ಯದ ಮಾಜಿ ಶಾಸಕರು, ಮಾಜಿ ಸಂಸದರಿಗೆ ಸಿಗುತ್ತಿರುವ ಪಿಂಚಣಿ ಇಷ್ಟಿದೆ ಕಣ್ರೀ..

ABOUT THE AUTHOR

...view details