ಕರ್ನಾಟಕ

karnataka

ಕಲ್ಪತರು ನಾಡಿನಲ್ಲಿ ಸಿದ್ಧರಾಮಯ್ಯ ಮತಬೇಟೆ; ಅಭಿಮಾನಿಗಳಿಂದ ಕುರಿ ಗಿಫ್ಟ್

By

Published : Apr 30, 2023, 10:15 PM IST

Updated : Apr 30, 2023, 10:21 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರಾ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

shira people gift sheep to Siddaramaiah
ಶಿರಾದ ಜನರು ಸಿದ್ದರಾಮಯ್ಯಗೆ ಕುರಿ ಗಿಫ್ಟ್ ನೀಡಿ ಅಭಿನಂದಿಸಿದರು.

ಕಲ್ಪತರು ನಾಡಿನಲ್ಲಿ ಸಿದ್ಧರಾಮಯ್ಯ ಮತಬೇಟೆ ನಡೆಸಿದರು.

ತುಮಕೂರು:ಕೊಬ್ಬರಿ ನಾಡು ತುಮಕೂರಲ್ಲಿ ಚುನಾವಣಾ ಆರ್ಭಟ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಜನರು ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಇಂದು ಶಿರಾ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಮತಬೇಟೆ ನಡೆಸಿದರು. ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಜನರು ಕುರಿ ಗಿಫ್ಟ್ ನೀಡಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದ್ರು. ಶಿರಾ ಚುನಾವಣಾ ಪ್ರಚಾರದ ಬಳಿಕ ಹೆಲಿಕಾಪ್ಟರ್‌ನಲ್ಲಿ ಚಿಕ್ಕನಾಯಕನಹಳ್ಳಿ ಆಗಮಿಸಿದ ಅವರು, ಚಿಕ್ಕನಾಯಕನಹಳ್ಳಿಯ ಹೈಸ್ಕೂಲ್ ಮೈದಾನದಲ್ಲಿ ಕಿರಣ್ ಕುಮಾರ್ ಪರ ಮತಯಾಚನೆ ನಡೆಸಿದರು.

ಕಮಿಷನ್ ಹೊಡೆಯುವ ಸರ್ಕಾರ ಬಂದಿತ್ತಾ?: ಇವರ ಕಾಲದಲ್ಲಿ ಏನ್ ನಡೀತಿದೆ. ಇದೇ ಬಿಜೆಪಿ ಸರ್ಕಾರ ಏನ್ ಮಾಡುತ್ತಿದೆ. 45%-50% ಕಮಿಷನ್ ಹೊಡೀತಿದ್ದಾರಲ್ಲಾ. ಹಿಂದೆ ಯಾವಾಗಾದ್ರೂ ಕರ್ನಾಟಕದಲ್ಲಿ 40% ಯಿಂದ 50% ಪರ್ಸೆಂಟ್ ಕಮಿಷನ್ ಹೊಡೆಯುವ ಸರ್ಕಾರ ಬಂದಿತ್ತಾ? ಕಂಟ್ರಾಕ್ಟರ್ ಅಸೋಸಿಯೇಷನ್‌ನವರು ಯಾವಾಗಾದ್ರೂ ಪತ್ರ ಬರೆದಿದ್ದರಾ? ಪಿಎಮ್‌ಗೆ ಕಮಿಷನ್ ಹೊಡೀತಿದಾರೆ ಎಂದು ಪತ್ರ ಬರೆದಿದ್ದರಾ ಎಂದು ಕೇಳಿದರು.

ಇದನ್ನೂಓದಿ:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ: ಪ್ರಧಾನಿಗೆ ಹೂಮಳೆ

Last Updated :Apr 30, 2023, 10:21 PM IST

ABOUT THE AUTHOR

...view details