ಶಿವಮೊಗ್ಗ:ಮನೆಯಲ್ಲಿ ಯಾರು ಇಲ್ಲದ ವೇಳೆ ದಂಪತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗರದಹಳ್ಳಿ ಕ್ಯಾಂಪ್ನಲ್ಲಿ ನಡೆದಿದೆ.
ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್ನ ಸಂತೋಷ್ ಹಾಗೂ ಅವರ ಪತ್ನಿ ಪಾರ್ವತಿ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಇಬ್ಬರು ಹಿರಿಯರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಭಾನುವಾರ ಶೀಗೆ ಹುಣ್ಣಿಮೆ ಪೂಜೆಗೆಂದು ಮನೆಯ ಸದಸ್ಯರೆಲ್ಲಾ ತೋಟಕ್ಕೆ ತೆರಳಿದ್ದ ವೇಳೆ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಮನಯವರೆಲ್ಲಾ ವಾಪಸ್ ಬಂದಾಗ ಮನೆ ಬಾಗಿಲು ಹಾಕಿತ್ತು. ಕಿಟಕಿ ತೆರೆದು ನೋಡಿದಾಗ ಇಬ್ಬರು ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ: ಮನೆಯಲ್ಲಿ ಯಾರು ಇಲ್ಲದ ವೇಳೆ ನವ ದಂಪತಿಗಳಿಬ್ಬರು ಒಂದೇ ಸೀರೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗರದಹಳ್ಳಿ ಕ್ಯಾಂಪ್ ನಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್ ನ ಸಂತೋಷ್ ಹಾಗೂ ಆತನ ಪತ್ನಿ ಪಾರ್ವತಿ ರವರು ನಿನ್ನೆ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸಂತೋಷ್ ಆಗರದಹಳ್ಳಿಯ ನಿವಾಸಿಯಾಗಿದ್ದು, ಪಾರ್ವತಿ ಹಾಸನ ಜಿಲ್ಲೆ ಹಲ್ಮಿಡಿ ಗ್ರಾಮದವರಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಇಬ್ಬರು ಹಿರಿಯರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು.Body:ಮದುವೆಯಾಗಿ ಒಂದೂವರೆ ವರ್ಷವಾದರೂ ಸಹ ಮಕ್ಕಳಾಗಿರಲಿಲ್ಲ. ಇನ್ನೂ ಸಂತೋಷ ಕೆಲ್ಸಕ್ಕೆ ಹೋಗದೆ ಕುಡಿಯುತ್ತಾ ಮನೆಯಲ್ಲೆ ಇರುತ್ತಿದ್ದ. ತನಗೆ ಬೇಕಾದಾಗ ಕೆಲ್ಸಕ್ಕೆ ಹೋಗುತ್ತಿದ್ದ. ಈತನ ಅಣ್ಣ ಈಶ್ವರ್ ಮದುವೆಯಾಗಿ ಬೇರೆ ಇದ್ದ. ಸಂತೋಷ್ ತಾಯಿ ಮನೆ ಬಳಿಯೇ ಎಗ್ ರೈಸ್ ಅಂಗಡಿ ನಡೆಸುತ್ತಿದ್ದರು. ನಿನ್ನೆ ಭೂಮಿ ಹುಣ್ಣಿಮೆಗೆಂದು ಸಂತೋಷ್ ನ ಅಕ್ಕಂದಿರು ಹಾಗೂ ಭಾವಂದಿರು ಬಂದಿದ್ದರು. ಅವರೆಲ್ಲಾ ತೋಟಕ್ಕೆ ಪೊಜೆಗೆ ಹೋಗೋಣ ಬನ್ನಿ ಎಂದು ಕರೆದಿದ್ದಾರೆ. ಈ ವೇಳೆ ನೀವು ಮುಂದೆ ಹೋಗಿ ಹಿಂದೆ ನಾವು ಬೈಕ್ ನಲ್ಲಿ ಬರ್ತಿವಿ ಅಂತ ಎಲ್ಲಾರನ್ನು ಕಳುಹಿಸಿದ್ದಾರೆ. Conclusion:ನಂತ್ರ ಮೊಸರು ಬೇಕು ಎಂದು ತೋಟದಿಂದ ಅವರ ಭಾವ ಮನೆಗೆ ವಾಪಸ್ ಬಂದಾಗ ನೀವು ಹೊರಡಿ ಹಿಂದೆನೆ ಬರ್ತಿವಿ ಅಂತ ಹೇಳಿದ್ದಾರೆ. ಆದ್ರೆ, ತೋಟಕ್ಕೆ ಹೋಗದೆ ದಂಪತಿಗಳಿಬ್ಬರು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನೂ ತೋಟದಿಂದ ವಾಪಸ್ ಬಂದಾಗ ಮನೆ ಬಾಗಿಲು ಹಾಕಿದಾಗ ಕಿಟಕಿ ತೆರೆದು ನೋಡಿದಾಗ ಇಬ್ಬರು ನೇಣು ಹಾಕಿ ಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಪಾರ್ವತಿರವರ ಸಂಬಂಧಿಕರಿಗೆ ಪೋನ್ ಮಾಡಿ ತಿಳಿಸಿ, ನಂತ್ರ ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರ ಸಾವಿಗೆ ಕಾರಣ ಮಾತ್ರ ತಿಳಿದು ಬಂದಿಲ್ಲ. ಹೊಳೆಹೊನ್ನೂರು ಪೊಲೀಸರು ಕೇಸು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.