ಕರ್ನಾಟಕ

karnataka

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾರತ್ ಬಂದ್‌ ನೀರಸ

By

Published : Sep 27, 2021, 9:13 PM IST

Updated : Sep 27, 2021, 9:57 PM IST

ಪ್ರತಿಭಟನೆ ಮೆರವಣಿಗೆ ಮುಗಿಸಿ ಮಹಾವೀರ ವೃತ್ತದಲ್ಲಿ ಬಹಿರಂಗ ಸಭೆ ನಡೆಸುವಾಗ ರೈತ ಮುಖಂಡ ಕೆ ಟಿ ಗಂಗಾಧರ್ ಅವರು ಭಾಷಣ ಮಾಡುವಾಗ ಮಸೀದಿಯಿಂದ ಆಜಾನ್ ಶಬ್ಧ ಕೇಳುತ್ತಿದ್ದಂತಯೇ ತಮ್ಮ ಭಾಷಣವನ್ನು ನಿಲ್ಲಿಸಿದರು.‌ ಆಜಾನ್ ಮುಗಿದ ಮೇಲೆ ಭಾಷಣ ಮುಂದುವರೆಸಿದರು. ಈ ಮೂಲಕ ರೈತರು ಭಾವವೈಕತೆಯನ್ನು ಮೆರೆದರು..

Bharat bandh protest in shivamogga
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾರತ್ ಬಂದ್​ಗೆ ನೀರಸ ಪ್ರತಿಕ್ರಿಯೆ

ಶಿವಮೊಗ್ಗ: ಭಾರತ್ ಬಂದ್​​ಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. 11 ಗಂಟೆಯ ನಂತರ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ರಾಮಣ್ಣನ ಶ್ರೇಷ್ಠಿ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಭತ್ತದ ಮೂಟೆಯನ್ನಿಟ್ಟುಕೊಂಡು ಬಂದು ರೈತರು ಭಾಗಿಯಾದರು. ರೈತರ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್, ಸಿಐಟಿಯುಸಿ, ಎಸ್‌ಡಿಪಿಐ ಸೇರಿ ಅನೇಕ ಸಂಘಟನೆಗಳು ಬೆಂಬಲ‌ ಸೂಚಿಸುವುದರ ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾರತ್ ಬಂದ್‌ ನೀರಸ

ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆಯ ಮೂಲಕ ಮಹಾವೀರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ತಮ್ಮ ಪ್ರತಿಭಟನೆಯನ್ನು ಮುಕ್ತಾಯ ಮಾಡಲಾಯಿತು. ಪ್ರತಿಭಟನೆಯಲ್ಲಿ ಕುದುರೆ ಮೇಲೆ ಕುಳಿತು ವಾಟಾಳ್ ಮಂಜುನಾಥ್ ಗಮನ ಸೆಳೆದರು. ಹಾಗೆಯೇ ಪ್ರತಿಭಟನೆಯಲ್ಲಿ ಭಾಗಿಯಾದವರು ಕಾಲ್ನಡಿಗೆಯಲ್ಲಿ ಸಾಗಿದರು.

ಆಜಾನ್ ವೇಳೆ ಭಾಷಣ ನಿಲ್ಲಿಸಿ ಗೌರವ :ಪ್ರತಿಭಟನೆ ಮೆರವಣಿಗೆ ಮುಗಿಸಿ ಮಹಾವೀರ ವೃತ್ತದಲ್ಲಿ ಬಹಿರಂಗ ಸಭೆ ನಡೆಸುವಾಗ ರೈತ ಮುಖಂಡ ಕೆ ಟಿ ಗಂಗಾಧರ್ ಅವರು ಭಾಷಣ ಮಾಡುವಾಗ ಮಸೀದಿಯಿಂದ ಆಜಾನ್ ಶಬ್ಧ ಕೇಳುತ್ತಿದ್ದಂತೆಯೇ ತಮ್ಮ ಭಾಷಣವನ್ನು ನಿಲ್ಲಿಸಿದರು.‌ ಆಜಾನ್ ಮುಗಿದ ಮೇಲೆ ಭಾಷಣ ಮುಂದುವರೆಸಿದರು. ಈ ಮೂಲಕ ರೈತರು ಭಾವವೈಕತೆಯನ್ನು ಮೆರೆದರು.

Last Updated :Sep 27, 2021, 9:57 PM IST

ABOUT THE AUTHOR

...view details