ಕರ್ನಾಟಕ

karnataka

ಅರ್ಕಾವತಿ ನದಿ ಶುದ್ಧೀಕರಣ, ಶುದ್ಧ ನೀರಿನ ಘಟಕಗಳನ್ನು ಹೆಚ್ಚಿಸಲು ಆಗ್ರಹ

By

Published : Aug 1, 2019, 11:35 AM IST

ರಾಮನಗರದ ಜೀವನದಿ ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಬೇಕು. ಕುಡಿವ ನೀರನ್ನು ಸಮರ್ಪಕವಾಗಿ ವದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಲು ಸಾರ್ವಜನಿಕರ ಒತ್ತಾಯ

ರಾಮನಗರ‌:ಸಮುದ್ರದ ನಂಟು ಆದರೆ, ಉಪ್ಪಿಗೆ ಬರ ಅಂತಾರೆ ಹಾಗೇ ರಾಮನಗರದಲ್ಲಿ ನದಿ ಹರಿದರೂ ನೀರಿನ ಸಮಸ್ಯೆ ಎದುರಾಗಿದೆ. ಒಂದು ಕಾಲದಲ್ಲಿ ಜೀವನದಿ ಎಂದು ಖ್ಯಾತಿ ಪಡೆದು ನಗರಕ್ಕೆ ಕುಡಿಯುವ ನೀರನ್ನು ವದಗಿಸುತ್ತಿದ್ದ ಅರ್ಕಾವತಿ ನದಿ ಇಂದು ಬಳಸಲು ಬಾರದಂತಾಗಿದೆ. ತ್ಯಾಜ್ಯ ವಸ್ತುಗಳು ಸೇರಿಕೊಂಡಿದ್ದರ ಜತೆಗೆ ಸಮರ್ಪಕ ನಿರ್ವಹಣೆ ಇಲ್ಲದೇ ಕೊಚ್ಚೆಗುಂಡಿಯಾಗಿ ಹರಿಯುತ್ತಿದೆ.

ಅರ್ಕಾವತಿ ನದಿಯ ಸರಬರಾಜು ಹಾಗೂ ಶುದ್ಧೀಕರಣದ ಪಂಪ್​ ಹೌಸ್​ ಘಟಕ ದುರಸ್ತಿಗೊಳಿಸಲು ಸಾರ್ವಜನಿಕರ ಒತ್ತಾಯ

ನಗರಕ್ಕೆ ಕಾವೇರಿ ನೀರು ಬಳಸಿಕೊಂಡು ಕುಡಿವ ನೀರು ಸರಬರಾಜು ಮಾಡುವ ಕಾವೇರಿ ನೀರಾವರಿ ನಿಗಮ ಕೇವಲ ಗೃಹ ಬಳಕೆಗಾಗಿ ಅರ್ಕಾವತಿ ನದಿ ನೀರನ್ನು ಬಳಸುವಂತೆ ನಗರ ಸಭೆಯ ಮೂಲಕ ಘೋಷಣೆ ಹೊರಡಿಸಿದೆ. ಆದರೆ, ನಗರಕ್ಕೆ ಬಿಡಲಾಗುತ್ತಿರುವ ಕಾವೇರಿ ನೀರು ಸಮರ್ಪಕವಾಗಿಲ್ಲದ ಕಾರಣ ಹಲವು ವಾರ್ಡ್​ಗಳಲ್ಲಿ ಅರ್ಕಾವತಿ ನದಿ ನೀರನ್ನೆ ಕುಡಿಯುತ್ತಿದ್ದಾರೆ. ಯಾವುದೇ ಫಿಲ್ಟರ್​ ಇಲ್ಲದೇ ಇರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.

ಅರ್ಕಾವತಿ ನದಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲು ನಿರ್ಮಾಣ ಮಾಡಿರುವ ಪಂಪ್ ಹೌಸ್ ಸುತ್ತ ದುರ್ನಾತ ಬೀರುತ್ತಿದೆ. ಕಪ್ಪೆ ಜೊಂಡು ಸೇರಿದಂತೆ ನಿರಂತರವಾಗಿ ತ್ಯಾಜ್ಯ ಸೇರುತ್ತಿದೆ. ನಗರಸಭೆ ಕುಡಿಯಲು ಅರ್ಕಾವತಿ ನೀರು ಬಳಸಬೇಡಿ, ಕಾವೇರಿ ನೀರನ್ನು ಬಳಸುವಂತೆ ಘೋಷಿಸಿದೆ. ಆದರೆ, ಸಮಪರ್ಕವಾಗಿ ಕಾವೇರಿ ನೀರು ಎಲ್ಲ ವಾರ್ಡ್​ಗಳಿಗೆ ತಲುಪುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪವಾಗಿದೆ.

ಅನೇಕ ಬಾರಿ ಮನವಿ ಸಲ್ಲಿಸಿ ಶುದ್ಧ ನೀರಿನ ಕೊರತೆ ಬಗ್ಗೆ ಗಮನಕ್ಕೆ ತಂದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರು ಆಕ್ರೋಶಕ್ಕೂ ಕಾರಣವಾಗಿದೆ ವ್ಯಕ್ತಪಡಿಸಿದ್ದಾರೆ.

ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಾರ್ವಜನಿಕರು ಗೋಳಿಡುವಂತಾಗಿದೆ. ಶುದ್ಧ ನೀರಿನ ಘಟಕಗಳ ದುರಸ್ತಿ ಕಾರ್ಯವಾಗಬೇಕು. ಹೆಚ್ಚಿನ ಘಟಕಗಳನ್ನು ತೆರೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Intro:ರಾಮನಗರ‌: ಸಮುದ್ರದ ನಂಟು ಆದ್ರೆ ಉಪ್ಪಿಗೆ ಬರ ಅಂತಾರೆ ಹಾಗೆಯೇ ನಗರದಲ್ಲಿ ಅರ್ಕಾವತಿ ನದಿ ಹರಿಯುತ್ತೆ ಆದರೆ ನೀರಿಗೆ ಮಾತ್ರ ಬರ. ಅದೂ ಒಂದು ಕಾಲದಲ್ಲಿ ನಗರಕ್ಕೆ‌ ಕುಡಿಯುವ ನೀರನ್ನು ನೀಡಿ ಜೀವನದಿ ಎಂದೇ ಖ್ಯಾತಿಯಾಗಿತ್ತು. ಆದರೆ ಅದೇ ನದಿ ಇಂದು ಕಲುಷಿತ ಕಲ್ಮಶಗಳ ಆಗರವಾಗಿದೆ.


Body:ನಗರದ ಬಹುತೇಕ ಪ್ರದೇಶದ ನೀರಿನ ಬವಣೆ ನೀಗಿಸುವ ಅರ್ಕಾವತಿ ನದಿ ಒಂದು ಕಾಲದಲ್ಲಿ ರಾಮನಗರದ ಜೀವನದಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ಇಂದು ನಗರದ ತ್ಯಾಜ್ಯ ಹಾಗೂ ಕಲ್ಮಶಗಳನ್ನು ನದಿಗೆ ಬಿಟ್ಟ ಪರಿಣಾಮ ಇಂದು ಕಲುಷಿತಗೊಂಡು ವಿಷಕಾರಕ ನೀರಾಗಿದೆ. ನಗರಕ್ಕೆ ಕಾವೇರಿ ನೀರನ್ನು ಬಳಸಿಕೊಂಡು ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ ನೀರಾವರಿ ನಿಗಮ ಕೇವಲ ಗೃಹ ಬಳಕೆಗಾಗಿ ಅರ್ಕಾವತಿ ನದಿ ನೀರನ್ನು ಬಳಸುವಂತೆ ನಗರಸಭೆಯ ಮೂಲಕ ಘೋಷಣೆ ಹೊರಡಿಸಿದೆ . ಆದರೆ ನಗರಕ್ಕೆ ಬಿಡಲಾಗುತ್ತಿರುವ ಕಾವೇರಿ ನೀರು ಸಾಕಾಗದ ಪರಿಣಾಮ ಹಲವಾರು ವಾರ್ಡ್ ಗಳಲ್ಲಿ ಅರ್ಕಾವತಿ ನದಿ ನೀರನ್ನು ಕುಡಿಯಲಾರಂಭಿಸಿದ್ದು ಹಲವು ರೋಗರುಜಿನಗಳಿಗೆ ದಾರಿಮಾಡಿಕೊಟ್ಟಿದೆ. ನಗರದಲ್ಲಿ ಅರ್ಕಾವತಿ ನದಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲು ನಿರ್ಮಾಣ ಮಾಡಿರುವ ಪಂಪ್ ಹೌಸ್ ಬಳಿ ಗಬ್ಬು ನಾರುತ್ತಿದ್ದು ಕಲ್ಮಶಗಳ ಆಗರ ಎಂಬುದಕ್ಕೆ ಅಲ್ಲಿ ಬೆಳೆದಿರುವ ಜೊಂಡುಗಳು ಸಾಕ್ಷೀಕರಿಸುತ್ತವೆ. ನಗರಸಭೆಯ ಕುಡಿಯಲು ನೀರನ್ನು ಉಪಯೋಗಿಸಬೇಡಿ ಎಂದರೂ ಕೂಡ ನೀರಿನ ಕೊರತೆಯಿಂದಾಗಿ ಬಹುಪಾಲು ಜನತೆ ಇದೇ ನೀರನ್ನು ಆಶ್ರಯಿಸಿದ್ದು ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Conclusion:ಒಟ್ಟಾರೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ನಗರಕ್ಕೆ ನೀರು ಪೂರೈಸಲು ಪ್ರಯತ್ನಿಸಿದ್ದರೂ ಕೂಡ ನೀರಿನ ಅಭಾವ ನೀಗಿಸುವಲ್ಲಿ ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಆಡಳಿತ ಮಂಡಳಿ ವಿಫಲವಾಗಿದೆ. ವಾರಕ್ಕೆ ಒಮ್ಮೆ ಅರ್ಧ ಗಂಟೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಿದ್ದು ನೀರಿನ ಅಭಾವ ನೀಗಿಸುವಲ್ಲಿ ವಿಫಲವಾಗಿರುವ ಕಾರಣಕ್ಕೆ ನಗರದ ಜನತೆ ಅರ್ಕಾವತಿ ನದಿ ನೀರನ್ನು ಆಶ್ರಯಿಸಬೇಕಾಗಿದೆ ಇದು ಹಲವು ರೋಗಗಳಿಗೆ ತುತ್ತಾಗುವಂತೆ ಮಾಡಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ ನೀರಿನ ಸಮಸ್ಯೆ ನೀಗಿಸಲು ಮತ್ತಷ್ಟು ಘಟಕಗಳ ಸ್ಥಾಪನೆಗೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

ABOUT THE AUTHOR

...view details