ಕರ್ನಾಟಕ

karnataka

ಬಿಜೆಪಿ ಸ್ವಂತ ಶಕ್ತಿ ಮೇಲೆ‌ ಸರ್ಕಾರ ರಚನೆ‌ ಮಾಡಿಲ್ಲ: ಸಚಿವ ಶಿವರಾಜ್ ತಂಗಡಗಿ‌

By ETV Bharat Karnataka Team

Published : Sep 3, 2023, 6:56 PM IST

ಬಿಜೆಪಿ ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡಿದ ಉದಾಹರಣೆ ಇಲ್ಲ. ಆ ಪಕ್ಷದ ನಾಯಕರಿಗೆ ಬದ್ಧತೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್​ ತಂಗಡಗಿ ತಿಳಿಸಿದ್ದಾರೆ.

ಸಚಿವ ಶಿವರಾಜ್​ ತಂಗಡಗಿ
ಸಚಿವ ಶಿವರಾಜ್​ ತಂಗಡಗಿ

ರಾಮನಗರ : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ‌ ಬಿಜೆಪಿ ಸ್ವಂತ ಶಕ್ತಿ ಮೇಲೆ‌ ಸರ್ಕಾರ ರಚನೆ‌ ಮಾಡಿಲ್ಲ. ಅಡ್ಡದಾರಿಯಲ್ಲಿ ಅಧಿಕಾರಕ್ಕೇರುವುದು ಆ ಪಕ್ಷದ ನಾಯಕರಿಗೆ ಕರಗತವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ‌ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ‌‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅನೈತಿಕವಾಗಿ ಸರ್ಕಾರ ರಚನೆ ಮಾಡುವುದೇ ಅವರ ಕಾಯಕ. ಬಿಜೆಪಿ ಸ್ವಂತ ಶಕ್ತಿ ಮೇಲೆ‌ ಸರ್ಕಾರ ರಚನೆ‌ ಮಾಡಿದ‌‌ ಉದಾಹರಣೆ ಇಲ್ಲ. ಆ ಪಕ್ಷದ ನಾಯಕರಿಗೆ ಬದ್ಧತೆ ಇಲ್ಲ. ಆಪರೇಷನ್ ಕಮಲ‌ ಮಾಡುವ ಕನಸು ಕಾಣುತ್ತಿದ್ದಾರೆ. ಇದೆಲ್ಲ‌ ನಡೆಯುವುದಿಲ್ಲ. ಜನತೆ ನಮಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ. ಯಾವುದೇ ಆಪರೇಷನ್‌‌ ನಡೆಯಲ್ಲ. ನಮ್ಮ ಗ್ಯಾರಂಟಿಗಳಿಗೆ ಬೆದರಿ ಆ ಪಕ್ಷದ ಶಾಸಕರು ನಮ್ಮ‌ ಪಕ್ಷದತ್ತ‌ ಬರುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಜಾನಪದ ಲೋಕದಲ್ಲಿನ ಮ್ಯೂಸಿಯಂ

ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗರಿಗೆ ತಕ್ಕ‌ಪಾಠ ಕಲಿಸಿದರೂ ಆ ಪಕ್ಷದ ಮುಖಂಡರಿಗೆ ಬುದ್ದಿಬಂದಂತೆ ಕಾಣುತ್ತಿಲ್ಲ ಎಂದು ಛೇಡಿಸಿದರು. ಕೇಂದ್ರದಲ್ಲಿ‌ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ‌ ನರೇಂದ್ರ ಮೋದಿ‌‌‌‌ ಅವರು, ಅಧಿಕಾರಕ್ಕೆ ‌ಬಂದ‌ ಕೂಡಲೇ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದೆಲ್ಲ‌ ಜನತೆಗೆ ಸುಳ್ಳು ಆಶ್ವಾಸನೆ ನೀಡಿ, ಅಧಿಕಾರಕ್ಕೆ ‌ಬಂದರು.‌ ಅದೆಲ್ಲ ಆಶ್ವಾಸನೆಯಾಗಿಯೇ ಉಳಿದಿದೆ. ನಾವು ಚುನಾವಣಾ ಪೂರ್ವದಲ್ಲಿ‌ ಕೊಟ್ಟ ಆಶ್ವಾಸನೆಯಂತೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ರಾಮನಗರ ಜಾನಪದ ಲೋಕಕ್ಕೆ ಭೇಟಿ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಚಿವ ಶಿವರಾಜ್ ತಂಗಡಗಿ ಅವರು ಮೊದಲ ಬಾರಿಗೆ ಭಾನುವಾರ ರಾಮನಗರದ ಜಾನಪದ‌ ಲೋಕಕ್ಕೆ ಭೇಟಿ ನೀಡಿದರು. ಜಾನಪದ ಲೋಕ ವೀಕ್ಷಣೆಗೆ ಮೊದಲು ದಿವಂಗತ ಹೆಚ್. ಎಲ್ ನಾಗೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ‌, ಸುಮಾರು ಎರಡು ತಾಸು ಲೋಕಮಹಲ್, ಲೋಕಮಾತಾ ಮಂದಿರ, ಜಾನಪದ ಕಲಾಕೃತಿಗಳು, ಪೌರಾಣಿಕ ಹಾಗೂ ಮಹಾ ಕಾವ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮನಗರ ಜಾನಪದ ಲೋಕಕ್ಕೆ ಭೇಟಿ

ಜಾನಪದ ಲೋಕವನ್ನು ವೀಕ್ಷಣೆ ಮಾಡಲು ಬರುವ ಸಂಖ್ಯೆ ಕಡಿಮೆ ಆಗಿರುವುದಿಲ್ಲ. ಅದಕ್ಕಂತಲೇ ಜನರು ಬರುತ್ತಾರೆ. ಬೆಂಗಳೂರು – ಮೈಸೂರು ಹೆದ್ದಾರಿಯಾದ ನಂತರ ಜಾನಪದ ಲೋಕಕ್ಕೆ ವೀಕ್ಷಣೆಗೆಂದು ಜನರು ಬರುವುದು ಕಡಿಮೆಯಾಗಿಲ್ಲ. ಇನ್ನು ಹೆಚ್ಚು ಪ್ರಚಾರ ಮಾಡಿ ಇನ್ನು ಹೆಚ್ಚಿನ ಜನರನ್ನು ಆಕರ್ಷಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಆದುದರಿಂದ ಜಾನಪದ ಲೋಕ ವೀಕ್ಷಣೆ ಮಾಡಿ, ಇಲ್ಲಿನ ಮಾದರಿಯಲ್ಲಿ ಹೆಚ್ಚಿನ ಆಧುನಿಕತೆಯೊಂದಿಗೆ ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣ ಮಾಡಲಾಗುವುದು ಎಂದರು.

ಜಾನಪದ ಲೋಕದಲ್ಲಿನ ಮ್ಯೂಸಿಯಂ, ಲೋಕ ಮಾತಾ ಮಂದಿರ, ಲೋಕ ಮಹಲ್, ಲೋಕ ಸಿರಿ, ಗಿರಿಜನ ಲೋಕ ಹೀಗೆ 15 ಎಕರೆಯಲ್ಲಿರುವ ಜಾನಪದ ಲೋಕವನ್ನು ಪೂರ್ಣವಾಗಿ ವೀಕ್ಷಣೆ ಮಾಡಿ, ಅಲ್ಲಿನ ಸಿಬ್ಬಂದಿಯಿಂದ ಜಾನಪದ ಲೋಕದ ಮಾಹಿತಿಯನ್ನು ಪಡೆದರು.

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ- ಕರ್ನಾಟಕವೆಂದು ನಮ್ಮ ರಾಜ್ಯಕ್ಕೆ ನಾಮಕರಣ ಮಾಡಿ, ನವೆಂಬರ್ 1 ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಆದುದರಿಂದ ರಾಜ್ಯಾದ್ಯಂತ ಹೆಸರಾಯಿತು. ಕರ್ನಾಟಕ ಉಸಿರಾಗಲಿ ಕನ್ನಡವೆಂಬ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದ್ದು, ಅದರಂತೆ ಒಂದು ವರ್ಷ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೊದಲು ರಾಜ್ಯದ ಸಾಹಿತಿಗಳು, ಹೋರಾಟಗಾರರ, ಕಲಾವಿದರ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದ ಸಭೆ ಪೂರ್ಣಗೊಂಡಿದ್ದು, ನಾಳೆ ಮೈಸೂರು ವಿಭಾಗದ ಸಭೆ ಪೂರ್ಣಗೊಂಡ ನಂತರ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ:ನಾವು ಆಪರೇಷನ್‌ ಶುರು ಮಾಡಿದ್ರೆ ಬಿಜೆಪಿ, ಜೆಡಿಎಸ್​​ನಲ್ಲಿ ಯಾರೂ ಇರಲ್ಲ: ಸಚಿವ ಶಿವರಾಜ್ ತಂಗಡಗಿ

ABOUT THE AUTHOR

...view details