ರಾಯಚೂರು:ಯುವಕನೋರ್ವ ಬೇವಿನಗಿಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್-ಹಿರೇಹೆಸರೂರು ಗ್ರಾಮದಲ್ಲಿ ನಡೆದಿದೆ. ಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಅಮರೇಶ ದುರಗಪ್ಪ(21) ಮೃತ ಯುವಕ.
ಅಮರೇಶ ಹಾಗೂ ಅದೇ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಯುವತಿ ಕುಟುಂಬದವರು ತಮ್ಮ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಯುವಕನ ತಾಯಿ ಯುವತಿಯ ಪೋಷಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಪಿಎಸ್ಐ ಭ್ರಷ್ಟಾಚಾರ ಕೇಸ್ ನ್ಯಾಯಾಂಗ ತನಿಖೆಗೆ ನೀಡಿ: ರಾಮಲಿಂಗಾರೆಡ್ಡಿ
Last Updated : Apr 26, 2022, 6:13 PM IST