ಕರ್ನಾಟಕ

karnataka

ಕುರುಬ ಸಮುದಾಯಕ್ಕಾಗಿ ಪಕ್ಷಾತೀತ ಹೋರಾಟ: ಕೆ.ವಿರೂಪಾಕ್ಷಪ್ಪ

By

Published : Dec 4, 2020, 9:49 PM IST

ಮುಂಬರುವ ಜನವರಿ, ಫ್ರೆಬವರಿ ತಿಂಗಳಲ್ಲಿ ರಾಜ್ಯದ ನಾನಾ ಕಡೆ ಸಮಾವೇಶ ಏರ್ಪಡಿಸಿ ಫೆ.7ರಂದು ಸುಮಾರು 10 ಲಕ್ಷ ಜನರನ್ನು ಸೇರಿಸುವ ಮೂಲಕ ಬೃಹತ್ ಸಮಾವೇಶವನ್ನು ಆಯೋಜಿಸಿ ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಸ್​ಟಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

ಕೆ.ವಿರುಪಾಕ್ಷಪ್ಪ
ಕೆ.ವಿರುಪಾಕ್ಷಪ್ಪ

ರಾಯಚೂರು: ಕುರುಬ ಸಮುದಾಯವನ್ನು ಎಸ್​ಟಿಗೆ (ಪರಿಶಿಷ್ಟ ಪಂಗಡ) ಸೇರಿಸಲು ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಕುರುಬ ಸಮಯದಾಯದ ಎಸ್​ಟಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಈ ಕುರಿತು ಹೋರಾಟ ನಡೆಸಲಾಗುತ್ತಿದೆ. 1868 ರಲ್ಲಿ ಬ್ರಿಟಿಷ್ ಸರ್ಕಾರದ ಪೀಪಲ್‌ ಆಫ್ ಇಂಡಿಯಾ ಬುಕ್​‌ನಲ್ಲಿ ನಮ್ಮ ಸಮುದಾಯವನ್ನು ಬುಡಕಟ್ಟು ಎಂದು ಬರೆದಿದೆ. 1901ರ ಬ್ರಿಟಿಷ್ ಸರ್ಕಾರದ ಜನಗಣತಿಯಲ್ಲೂ ಕುರುಬರು ಬುಡಕಟ್ಟು ಜನಾಂಗದವರು ಎಂದು ಉಲ್ಲೇಖವಿದೆ. ಮದ್ರಾಸ್ ಭಾಗಗಳಲ್ಲಿ ಕುರುಬ ಹೆಸರಿನಲ್ಲಿ ಎಸ್‌ಟಿ ಮೀಸಲಾತಿ ಪಡೆದಿದ್ದು, ಉಳಿದಂತೆ ಕೆಲವೆಡೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಎಸ್‌ಟಿ ಮೀಸಲಾತಿ ದೊರೆತಿಲ್ಲ ಎಂದರು‌.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ವಿರುಪಾಕ್ಷಪ್ಪ

ಮುಂಬರುವ ಜನವರಿ, ಫ್ರೆಬವರಿ ತಿಂಗಳಲ್ಲಿ ರಾಜ್ಯದ ನಾನಾ ಕಡೆ ಸಮಾವೇಶ ಏರ್ಪಡಿಸಿ ಫೆ.7ರಂದು ಸುಮಾರು 10 ಲಕ್ಷ ಜನರನ್ನು ಸೇರಿಸುವ ಮೂಲಕ ಬೃಹತ್ ಸಮಾವೇಶವನ್ನ ಆಯೋಜಿಸಿ ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸಲಾಗುವುದು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಮಾಜದ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರ ಬಳಿ ಕುರುಬ ಸಮುದಾಯದ ಗುರುಗಳು ಚರ್ಚೆ ಕೂಡ ಮಾಡಿದ್ದಾರೆ. ಆದರೂ ಅವರು ಆರ್‌ಆರ್‌ಎಸ್ ಕೈವಾಡವಿದೆ ಎನ್ನುವ ವಿಚಾರ ಯಾಕೆ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಅವರನ್ನ ಕೇಳಬೇಕು ಎಂದರು.

ABOUT THE AUTHOR

...view details