ಕರ್ನಾಟಕ

karnataka

ರಾಯಚೂರು: ಪ್ರೇಮವಿವಾಹ ವಿರೋಧಿಸಿ ಹತ್ಯೆ ಪ್ರಕರಣ, ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವ ಸಾವು

By

Published : Jul 12, 2020, 8:54 AM IST

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹತ್ಯೆಯಲ್ಲಿ, ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

one-more-death-in-sunkalapete-attack-case
ರಾಯಚೂರು: ಪ್ರೇಮವಿವಾಹ ವಿರೋಧಿಸಿ ಹತ್ಯೆ ಪ್ರಕರಣ, ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವ ಸಾವು

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹತ್ಯೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಸುಂಕಾಲಪೇಟೆ ನಿವಾಸಿಗಳಾದ ಮೌನೇಶ್ ಹಾಗೂ ಮಂಜುಳಾ ಎಂಬುವರ ಪ್ರೇಮ ವಿವಾಹ ವಿರೋಧಿಸಿ ನಾಲ್ವರ ಹತ್ಯೆಯಾಗಿತ್ತು. ಮಂಜುಳಾ ಕುಟುಂಬಸ್ಥರು ಮೌನೇಶ್ ಮನೆಗೆ ದಾಳಿ ಮಾಡಿ, ಮನೆಯಲ್ಲಿದ್ದ ಸಿಕ್ಕ ಸಿಕ್ಕ ವಸ್ತುಗಳಿಂದ ಮೌನೇಶ್ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದರು. ಈ ವೇಳೆ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಮೌನೇಶ್​ ತಂದೆ ಈರಪ್ಪ(65) ಚಿಕಿತ್ಸೆ ಫಲಕಾರಿಯಾಗಿದೆ ತಡರಾತ್ರಿ ಮೃತಪಟ್ಟಿದ್ದಾರೆ.

ಪ್ರೀತ್ಸೋದ್‌ ತಪ್ಪೆಂದ ಹುಡುಗಿ ಮನೆಯವರು.. ಕೊನೆಗೆ ಹುಡುಗನ ಮನೆಯ ನಾಲ್ವರನ್ನ ಹತ್ಯೆಗೈದರು..

ಇದರಿಂದ ಹತ್ಯೆಯಾದವರ ಸಂಖ್ಯೆಕ್ಕೆ ಐದಕ್ಕೆ ಏರಿಕೆಯಾಗಿದ್ದು, ಕೃತ್ಯವೆಸಗಿದ್ದ ಐವರನ್ನ ಪೊಲೀಸ್ ಬಂಧಿಸಿದ್ದಾರೆ. ಘಟನೆ ಬಗ್ಗೆ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details