ಕರ್ನಾಟಕ

karnataka

ರಾಯಚೂರು: ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು

By

Published : Jan 9, 2023, 12:16 PM IST

ಚರಂಡಿಗಾಗಿ ತೋಡಿದ್ದ ಗುಂಡಿಯ ಕಾಮಗಾರಿ ಪೂರ್ತಿಗೊಳಿಸದೇ ಇದ್ದುದರಿಂದ ಅದೇ ಗುಂಡಿಗೆ ಇಬ್ಬರು ಬಾಲಕರು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

Two boys from Raichur died after falling into an open drain
ತೆರೆದ ಚರಮಡಿ ಗುಂಡಿಗೆ ಬಿದ್ದು ರಾಯಚೂರಿನ ಬಾಲಕರಿಬ್ಬರು ಸಾವನ್ನಪ್ಪಿದ್ದಾರೆ

ರಾಯಚೂರು: ಆಟವಾಡುತ್ತಿದ್ದ ಇಬ್ಬರು ಮಕ್ಕಳು‌ ಕಾಲು ಜಾರಿ ಚರಂಡಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬ್ಯಾಗವಾಟ್​ನಲ್ಲಿ ಸಂಭವಿಸಿದೆ. ಬ್ಯಾಗವಾಟ್​ನಲ್ಲಿ ಚರಂಡಿ ನಿರ್ಮಾಣಕ್ಕೆ ಗುಂಡಿಯನ್ನು ತೋಡಲಾಗಿತ್ತು. ಈ ಗುಂಡಿಗೆ ಅಜಯ್(8), ಸುರೇಶ(6) ಎಂಬಿಬ್ಬರು ಬಾಲಕರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಒಂದೇ ಮನೆಯ ಅಣ್ಣ-ತಮ್ಮಂದಿರ ಮಕ್ಕಳು ಎಂದು ಹೇಳಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ?: ಗ್ರಾಮದಲ್ಲಿ ಚರಂಡಿ ಕಾಮಗಾರಿ ಮಾಡಲು ಗುಂಡಿ ತೋಡಲಾಗಿದೆ. ಗುಂಡಿ ತೋಡಿ ಎರಡ್ಮೂರು ತಿಂಗಳಾಗಿದ್ದರೂ ಚರಂಡಿ ಮುಚ್ಚುವ ಗೋಜಿಗೆ ಹೋಗಿರಲಿಲ್ಲ‌. ಇದರಿಂದಾಗಿ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ‌ಶಾಲೆಯ ಪಕ್ಕದಲ್ಲೇ ಈ ಚರಂಡಿ ಗುಂಡಿ ಇದ್ದು ಆಟವಾಡಲು ಹೋಗಿದ್ದಾಗ ಗುಂಡಿ ಇರೋದನ್ನು ಗಮನಿಸದೇ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ:ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅಣ್ಣನ ಸಾವು; ಇಬ್ಬರು ಮಕ್ಕಳ ಕಳೆದುಕೊಂಡ ಪೋಷಕರು!

ABOUT THE AUTHOR

...view details