ಕರ್ನಾಟಕ

karnataka

ರಾಯಚೂರಲ್ಲಿ ಮನೆ ತಾರಸಿ ಕುಸಿದು ಬಾಲಕ ಸಾವು.. ಸಾವಿನ ಮನೆಯಲ್ಲಿ ಮತ್ತೊಂದು ದುರಂತ

By

Published : May 12, 2022, 9:09 PM IST

Updated : May 12, 2022, 11:04 PM IST

ಮನೆಯ ತಾರಸಿ ಕುಸಿದು ಬಿದ್ದು ಓರ್ವ ಬಾಲಕ ಸಾವನ್ನಪ್ಪಿ, ನಾಲ್ಕೈದು ಬಾಲಕರು ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.

boy-dies-as-terrace-collapsed-in-raichur
ರಾಯಚೂರಲ್ಲಿ ಮನೆ ತಾರಸಿ ಕುಸಿದು ಬಾಲಕ ಸಾವು.. ಸಾವಿನ ಮನೆಯಲ್ಲಿ ಮತ್ತೊಂದು ದುರಂತ

ರಾಯಚೂರು:ಮನೆಯ ತಾರಸಿ ಕುಸಿದು ಬಿದ್ದು ಒಬ್ಬ ಬಾಲಕ ಸಾವನ್ನಪ್ಪಿ, ಇತರ ನಾಲ್ಕೈದು ಬಾಲಕರು ಗಾಯಗೊಂಡಿರುವ ಘಟನೆ ನಗರದ ಸಿಯಾತಲಾಬ್ ಬಡಾವಣೆಯಲ್ಲಿನ ಹಿಂದಿ ವರ್ಧಮಾನ ಶಾಲೆ ಬಳಿ ಗುರುವಾರ ಸಂಭವಿಸಿದೆ.

ವಿಕಾಸ್(6) ಎಂಬಾತನೆ ಮೃತ ಬಾಲಕನಾಗಿದ್ದಾನೆ, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಸ್ಲಂ ಬೋರ್ಡ್​​ನಿಂದ ನಿರ್ಮಿಸಲಾಗಿದೆ ಎನ್ನಲಾದ ಮನೆಯಲ್ಲಿ ವಾಸಿಸುತ್ತಿದ್ದ ಸೆಂಟ್ರಿಂಗ್ ಈರಣ್ಣ ಎಂಬಾತ ಮೃತಪಟ್ಟಿದ್ದ. ಶವಸಂಸ್ಕಾರಕ್ಕೆ ಸಂಬಂಧಿಕರು ಬಂದಿದ್ದರು. ಅಂತ್ಯಕ್ರಿಯೆಗೆ ಮನೆಯಲ್ಲಿ ಸಿದ್ಧತೆ ನಡೆಯುತ್ತಿದ್ದಾಗಲೇ ಬಾಲಕರು ಮನೆಯ ಟೆರೆಸ್ ಮೇಲೆ ನಿಂತು ನೋಡುತ್ತಿದ್ದರು.

ರಾಯಚೂರಲ್ಲಿ ಮನೆ ತಾರಸಿ ಕುಸಿದು ಬಾಲಕ ಸಾವು

ಇದೇ ವೇಳೆ, ತಾರಸಿ ಕುಸಿದು ಬಿದ್ದಿದೆ. ಮೇಲಿಂದ ಬಿದ್ದ ಬಾಲಕರಲ್ಲಿ ವಿಕಾಸ್​ ಮೃತಪಟ್ಟರೆ, ಇನ್ನುಳಿದವರು ಗಾಯಗೊಂಡಿದ್ದಾರೆ. ಮನೆಗಳನ್ನು ಸುಭದ್ರವಾಗಿ ನಿರ್ಮಿಸಿಕೊಳ್ಳದೆ, ದುರಸ್ತಿಯನ್ನೂ ಮಾಡದಿರುವುದೇ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ತಹಶಿಲ್ದಾರ್ ಡಾ.ಹಂಪಣ್ಣ ಸಜ್ಜನ್, ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಸದರ್‌ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟಿಯಲ್ಲಿ ದರೋಡೆ: ಸಹಾಯದ ನೆಪದಲ್ಲಿ ಚಿನ್ನಾಭರಣ, ಹಣ ದೋಚಿದ ಕಳ್ಳರು

Last Updated : May 12, 2022, 11:04 PM IST

ABOUT THE AUTHOR

...view details