ಮೈಸೂರು:ಇಂದು ನಡೆದ ಮೈಸೂರು ದಸರಾಜಂಬೂಸವಾರಿ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಯ ಸ್ತಬ್ಧಚಿತ್ರಗಳು, ದಸರಾ ಉಪಸಮಿತಿಯ ಸ್ತಬ್ಧಚಿತ್ರಗಳು ಹಾಗೂ ಸರ್ಕಾರದ 14 ಇಲಾಖೆಯ ವಿಶೇಷ ಸ್ತಬ್ಧಚಿತ್ರಗಳ ಜತೆಗೆ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ 95 ವಿವಿಧ ಬಗೆಯ ಕಲಾತಂಡಗಳು ಕಂಡುಬಂದವು.
ಬಾಗಲಕೋಟೆಯ ಬಾದಾಮಿ ಚಾಲುಕ್ಯ ವಂಶಸ್ಥ ಹಾಗೂ ಬನಶಂಕರಿ ದೇವಿ, ಬಳ್ಳಾರಿಯ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಸ್ಥಾನ, ಕಸೂತಿ ಮತ್ತು ನಾರಿಹಳ್ಳ ಅಣೆಕಟ್ಟು, ಬೆಳಗಾವಿಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರದ ಚಂದ್ರಯಾನ, ಬೀದರ್ನ ಕೃಷ್ಣ ಮೃಗ ಸಂರಕ್ಷಣಾ ಧಾಮ ಅರಣ್ಯ ಪ್ರದೇಶ, ಚಾಮರಾಜನಗರದ ಜಾನಪದ ಭಕ್ತಿ ಬೀಡು, ಆನೆ, ಹುಲಿಗಳ ಸಂತೃಪ್ತಿ ಕಾಡು, ಚಿಕ್ಕಬಳ್ಳಾಪುರ ಜಿಲ್ಲೆಯ ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರಿನ ಬೆಟ್ಟದಿಂದ ಬಟ್ಟಲಿಗೆ, ಚಿತ್ರದುರ್ಗದ ಗುರು ತಿಪ್ಪೇಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ ಪಿಲಿಕುಳ ಗುತ್ತಿನ ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್, ಸಂತ ಸೇವಾಲಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ, ಧಾರವಾಡ ಜಿಲ್ಲೆಯ ಧಾರಾವಾಡ ಪೇಡ, ಧಾರಾವಾಡದ ಎಮ್ಮೆ ನಮ್ಮ ಹೆಮ್ಮೆ, ಗದಗ್ ಜಿಲ್ಲೆಯ ಸಬರಮತಿ ಆಶ್ರಮ, ಹಾಸನ ಜಿಲ್ಲೆಯ ಹಾಸನಾಂಬ ದೇವಾಲಯ-ಹಲ್ಮಿಡಿ ಶಾಸನ-ಈಶ್ವರ ದೇವಸ್ಥಾನ ಅರಸೀಕೆರೆ ಜೇನುಕಲ್ಲು ಸಿದ್ಧೇಶ್ವರ ದೇವಾಲಯ, ಹಾವೇರಿ ಜಿಲ್ಲೆಯ ಶಂಕನಾದ ಮೊಳಗಿಸುತ್ತಿರುವ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ, ಕಲ್ಬುರ್ಗಿ ಜಿಲ್ಲೆಯ ರಾಜವಂಶಸ್ಥರ ಕೋಟೆ, ಚಿಂಚೋಳ ಅರಣ್ಯ ಪ್ರದೇಶ ವನ್ಯಜೀವಿ ಧಾಮ, ಕೊಡಗಿನ ಪ್ರೇಕ್ಷಣೀಯ ತಾಣಗಳು, ಕೋಲಾರದ ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಪನನ ಹಾಗೂ ಮರುಸ್ಥಾಪನೆ, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಮತ್ತು ಕೈಮಗ್ಗ. ಮಂಡ್ಯದ ಸಾಂಪ್ರದಾಯಿಕ ಉದ್ಯಮ ಆಲೆಮನೆ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು, ರಾಯಚೂರಿನ ನವರಂಗ ದರ್ವಾಜ ಹಾಗೂ R.T.P.S, ರಾಮನಗರದ ಚನ್ನಪಟ್ಟಣದ ಗೊಂಬೆಗಳು ಮತ್ತು ಕಬ್ಬಾಳಮ್ಮ ದೇವಸ್ಥಾನ, ಶಿವಮೊಗ್ಗದ ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ, ತುಮಕೂರು ಮೂಡಲಪಾಯ ಯಕ್ಷಗಾನ, ತವರು, ಉಡುಪಿಯ ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ, ಉತ್ತರ ಕನ್ನಡದ ಶರಾವತಿ ಮಡಿಲಲ್ಲಿ ವನ್ಯಜೀವಿ–ಸಿಂಹ ಬಾಲದ ಸಿಂಗಳಿಕಗಳ ಸಂರಕ್ಷಣೆ ಅಭಿಯಾನ, ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯನಗರದ ವಿಠಲ ದೇವಾಲಯ, ಯಾದಗಿರಿ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಸ್ತಬ್ಧಚಿತ್ರಗಳು ನೆರೆದಿದ್ದ ಜನರನ್ನು ಸೆಳೆದವು.