ಕರ್ನಾಟಕ

karnataka

ಸಚಿವ ನಾರಾಯಣ ಗೌಡ ಬಗ್ಗೆ ದ.ಸಂ.ಸ ರಾಜ್ಯ ಸಂಚಾಲಕನಿಂದ ನಿಂದನೆ ಆರೋಪ; ಬಿಜೆಪಿ ಮುಖಂಡರಿಂದ ದೂರು

By

Published : Sep 19, 2021, 1:46 PM IST

Updated : Sep 19, 2021, 1:54 PM IST

mandya bjp leaders complaint against m b shrinivas

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮೈಷುಗರ್ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಧರಣಿ ವೇಳೆ ಪ್ರಚಾರದ ಗೀಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣ ಗೌಡರ ವಿರುದ್ದ ಏಕ ವಚನದಲ್ಲಿ ದ.ಸಂ.ಸ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್ ಮಾತನಾಡುವ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಮುಖಂಡರು ದೂರಿದ್ದಾರೆ.

ಮಂಡ್ಯ: ಉಸ್ತುವಾರಿ ಸಚಿವ (ನಾರಾಯಣ ಗೌಡ) ರು ಹೇಡಿ ಎಂದು ನಿಂದಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಎಂಬಿಎಸ್ ವಿರುದ್ಧ ದೂರು ಸಲ್ಲಿಸಿದ್ದಾರೆ.

ದ.ಸಂ.ಸ ರಾಜ್ಯ ಸಂಚಾಲಕನ ಬಿಜೆಪಿ ಮುಖಂಡರಿಂದ ದೂರು ವಿರುದ್ಧ

ನಗರದಲ್ಲಿಂದು ಮಾತನಾಡಿದ ಅವರು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮೈಷುಗರ್ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಧರಣಿ ವೇಳೆ ಪ್ರಚಾರದ ಗೀಳಿಗೆ ಸಚಿವರ ವಿರುದ್ಧ ಏಕ ವಚನದಲ್ಲಿ ದ.ಸಂ.ಸ ರಾಜ್ಯ ಸಂಚಾಲಕ ಮಾತನಾಡುವ ಮೂಲಕ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದು ಅಶಾಂತಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಮುಖಂಡ ಹೊಸಳ್ಳಿ ನಾಗೇಶ್ ದೂರು ಸಲ್ಲಿಸಿರುವುದಾಗಿ ಹೇಳಿದರು.

ಬಿಜೆಪಿ ಮುಖಂಡರಿಂದ ದೂರು

ಇದನ್ನೂ ಓದಿ:ವಿವಾದಿತ ಹೇಳಿಕೆಗೆ ಕ್ಷಮೆ ಕೋರಿದ ಹಿಂದೂ ಮಹಾಸಭಾ ಮುಖಂಡ..

ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಅವರ ಬಳಿ ಶ್ರೀನಿವಾಸ್​ ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಸ್ಪಿ ಅವರಿಗೆ ದೂರು‌ ನೀಡಿರುವುದಾಗಿ ತಿಳಿಸಿದ್ದಾರೆ.

Last Updated :Sep 19, 2021, 1:54 PM IST

ABOUT THE AUTHOR

...view details