ಮಂಡ್ಯ:ರಸ್ತೆಯಲ್ಲಿ ಒಂದು ರೂಪಾಯಿ ಕಾಯಿನ್ ಕಂಡರೂ ಅದನ್ನು ಯಾರಿಗೂ ಕಾಣದಂತೆ ಎತ್ತಿಕೊಂಡು ಹೋಗುವ ಜನರೇ ಹೆಚ್ಚು. ಇನ್ನು ಚಿನ್ನಾಭರಣ ಸಿಕ್ಕರೆ ಬಿಡ್ತಾರಾ? ಆದರೆ, ಇಲ್ಲೊಬ್ಬ ಯುವಕ ದಾರಿಯಲ್ಲಿ ಸಿಕ್ಕ 33 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಚಂದ್ರಶೇಖರ್ ಎಂಬಾತ ಗುರುವಾರ ರಾತ್ರಿ ಕುಟುಂಬಸ್ಥರ ಜೊತೆ ಸಂಬಂಧಿಕರ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದ. ನಿದ್ರೆ ಮಾಡಲು ರೂಂಗೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಚಿನ್ನದ ಸರ ಸಿಕ್ಕಿದೆ.