ಕರ್ನಾಟಕ

karnataka

ಜಮೀನಿನಲ್ಲಿ ಸ್ಫೋಟಕ ವಸ್ತು ಪತ್ತೆ : ಸುಮಲತಾ ಭೇಟಿಗೆ ಹೆದರಿದರಾ ಗಣಿ ಮಾಲೀಕರು

By

Published : Jul 16, 2021, 8:37 PM IST

ಜಮೀನಿನಲ್ಲಿ ಪತ್ತೆಯಾದ ಸ್ಫೋಟಕಗಳನ್ನು ನೋಡಿದ ದನಗಾಹಿಗಳು ಆತಂಕಗೊಂಡಿದ್ದು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುಮಲತಾ ಭೇಟಿ ಹಿನ್ನೆಲೆ ಮತ್ತು ಪೊಲೀಸರು ಹಾಗೂ ಗಣಿ ಇಲಾಖೆಯ ದಾಳಿಗೆ ಹೆದರಿ ಈ ರೀತಿ ಕಲ್ಲು ಗಣಿಗಾರಿಕೆಯವರು ಸ್ಫೋಟಕಗಳನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ..

detection-of-explosive-material-on-a-farm-near-baby-hills
ಜಮೀನಿನಲ್ಲಿ ಸ್ಪೋಟಕ ವಸ್ತು ಪತ್ತೆ

ಮಂಡ್ಯ :ಕಲ್ಲುಗಣಿಗಾರಿಕೆಗೆ ಬಳಸುವ ಜೀವಂತ ಸ್ಫೋಟಕ ವಸ್ತುಗಳು ಜಮೀನಿನಲ್ಲಿ ಪತ್ತೆಯಾಗಿರುವ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿವೆ.

ಜಮೀನಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆ..

ಕನ್ನಂಬಾಡಿ ಕಟ್ಟೆಗೆ ಸನಿಹದ ಬೇಬಿಬೆಟ್ಟದ ಸಮೀಪ ಜಾನುವಾರುಗಳನ್ನು ಮೇಯಿಸುತ್ತಿದ್ದವರ ಕಣ್ಣಿಗೆ ಈ ಸ್ಫೋಟಕಗಳು ಕಂಡು ಬಂದಿವೆ. ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಜಮೀನಿನಲ್ಲಿ ಪತ್ತೆಯಾದ ಸ್ಫೋಟಕಗಳನ್ನು ನೋಡಿದ ದನಗಾಹಿಗಳು ಆತಂಕಗೊಂಡಿದ್ದು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುಮಲತಾ ಭೇಟಿ ಹಿನ್ನೆಲೆ ಮತ್ತು ಪೊಲೀಸರು ಹಾಗೂ ಗಣಿ ಇಲಾಖೆಯ ದಾಳಿಗೆ ಹೆದರಿ ಈ ರೀತಿ ಕಲ್ಲು ಗಣಿಗಾರಿಕೆಯವರು ಸ್ಫೋಟಕಗಳನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ABOUT THE AUTHOR

...view details