ಕೊಪ್ಪಳ: ಜಿಲ್ಲೆಯ ಕನಕಗಿರಿಗೆ ಯೋಗ ಗುರು ಬಾಬಾ ರಾಮದೇವ್ ಭೇಟಿ ನೀಡಿದ್ದಾರೆ. ಕನಕಗಿರಿ ಪಟ್ಟಣದಲ್ಲಿರುವ ಆಧ್ಯಾತ್ಮಿಕ ದೈವೀಪುರುಷ, ಶ್ರೀ ದೇವಿ ಪುರಾಣದ ಕತೃ ಚಿದಾನಂದ ಅವಧೂತರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಕತೃ ಗದ್ದುಗೆಯ ದರ್ಶನಾಶೀರ್ವಾದ ಪಡೆದುಕೊಂಡರು.
ಕನಕಗಿರಿಯ ಚಿದಾನಂದವಧೂತರ ಸಮಾಧಿ ಸ್ಥಳಕ್ಕೆ ಬಾಬಾ ರಾಮದೇವ್ ಭೇಟಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸ್ಥಳದಲ್ಲಿ ಶಕ್ತಿ ಇದೆ. ಚಿದಾನಂದ ಅವಧೂತ ಮಹಾತ್ಮರ ಸ್ಥಳವಿದು. ಚಿದಾನಂದ ಅವಧೂತರ ಕುರಿತು ಸಾಧಕರೊಬ್ಬರು ತಿಳಿಸಿದ್ದರಿಂದ ಅವರ ಸ್ಥಳದ ದರ್ಶನ ಮತ್ತು ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.