ಕರ್ನಾಟಕ

karnataka

ಕೊಪ್ಪಳ: ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವು!

By

Published : Oct 1, 2021, 2:10 PM IST

ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಮಂಜಪ್ಪ ದೊಡ್ಡಬಸಪ್ಪ ಹಾಲಸಮುದ್ರ ಸಾವಿಗೀಡಾದ ಘಟನೆ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ನಡೆದಿದೆ.

farmer died due to tractor accident
ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವು

ಕೊಪ್ಪಳ: ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತನನ್ನು ಮಂಜಪ್ಪ ದೊಡ್ಡಬಸಪ್ಪ ಹಾಲಸಮುದ್ರ (40) ಎಂದು ಗುರುತಿಸಲಾಗಿದೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವು!

ಮೃತ ಮಂಜಪ್ಪ ಇಂದು ಬೆಳಗ್ಗೆ ಜಮೀನಿಗೆ ಮೇವು ತರಲು ಹೋಗಿದ್ದರು. ಈ ಸಂದರ್ಭದಲ್ಲಿ ಬೇರೆಯವರ ಮರಳಿನ ಟ್ರ್ಯಾಕ್ಟರ್​​ನಲ್ಲಿ ಪ್ರಯಾಣ ಮಾಡಿದ್ದರು. ಅಕ್ರಮವಾಗಿ ಸಾಗಿಸುತ್ತಿದ್ದ ಈ ಟ್ರ್ಯಾಕ್ಟರ್ ಅನ್ನು ಹೇಗೆ ಬೇಕೋ ಹಾಗೆ ಚಾಲನೆ ಮಾಡಿದ್ದರಿಂದ ಪಲ್ಟಿಯಾಗಿದೆ. ಪರಿಣಾಮ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಟ್ರ್ಯಾಕ್ಟರ್​ ಚಾಲಕ ಪರಾರಿಯಾಗಿದ್ದಾನೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಮಲಪ್ರಭಾ ನದಿಗೆ ಕಂದನೊಂದಿಗೆ ತಾಯಿ ಜಿಗಿದಿದ್ದ 2 ದಿನಗಳ ಬಳಿಕ ಮಗುವಿನ ಶವ ಪತ್ತೆ

ABOUT THE AUTHOR

...view details