ಕರ್ನಾಟಕ

karnataka

ಕೊಪ್ಪಳ: ಕೊರೊನಾ ಭೀತಿ ಇಲ್ಲದೇ ಅದ್ಧೂರಿಯಾಗಿ ನಡೆದ ಬ್ರಹ್ಮರಥೋತ್ಸವ

By

Published : Apr 4, 2021, 1:33 PM IST

ಕನಕಗಿರಿ ಪಟ್ಟಣದಲ್ಲಿರುವ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಯ ರಥೋತ್ಸವ ಕೊರೊನಾ ಭೀತಿ ನಡುವೆಯೇ ಅದ್ಧೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿದೆ.

sri kanakachala lakshmi narasimhaswamy bhrahmarathostava
ಬ್ರಹ್ಮರಥೋತ್ಸವ

ಕೊಪ್ಪಳ: ಎರಡನೇ ತಿರುಪತಿ ಎಂದು ಹೆಸರಾಗಿರುವ ಜಿಲ್ಲೆಯ ಐತಿಹಾಸಿಕ ಕನಕಗಿರಿ ಪಟ್ಟಣದಲ್ಲಿರುವ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಇಂದು ಬೆಳಗ್ಗೆ ಸಡಗರದಿಂದ ನಡೆಯಿತು.

ಬ್ರಹ್ಮರಥೋತ್ಸವ

ಪ್ರತಿ ವರ್ಷ ಸಂಜೆಯ ವೇಳೆಯಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವವು ಈ ಬಾರಿ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಬೆಳಗ್ಗೆಯೇ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗೋವಿಂದ ಗೋವಿಂದ ಎಂಬ ಭಕ್ತರ ನಾಮಸ್ಮರಣೆ ಮುಗಿಲು ಮುಟ್ಟಿತ್ತು.

ಇತ್ತ ಜಿಲ್ಲಾಡಳಿತ ನಿಬಂಧನೆ ವಿಧಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜನ ಕೊರೊನಾ ನಿಯಮಗಳನ್ನು ಗಾಳಿ ತೂರಿ ಮಾಸ್ಕ್​ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ಇದನ್ನೂ ಓದಿ:ದೇಶದ ಕೋವಿಡ್​ ಪರಿಸ್ಥಿತಿ - ವ್ಯಾಕ್ಸಿನೇಷನ್ ಸ್ಥಿತಿಗತಿ ಕುರಿತು ಪ್ರಧಾನಿ ಉನ್ನತ ಮಟ್ಟದ ಸಭೆ

ABOUT THE AUTHOR

...view details