ಕರ್ನಾಟಕ

karnataka

ಕೋಲಾರದಲ್ಲಿ ವರುಣನ ಆರ್ಭಟ : ಮನೆಗಳಿಗೆ ನೀರು ನುಗ್ಗಿ ಅವಾಂತರ

By

Published : Jul 9, 2021, 7:37 AM IST

ರಾತ್ರಿ ಇಡೀ ನಿದ್ದೆಯಿಲ್ಲದೆ ಮನೆಗಳೊಳಗೆ ಬರುತ್ತಿದ್ದ ಮಳೆ ನೀರನ್ನ ಹೊರ ಹಾಕಲು ನಿವಾಸಿಗಳು ಹರಸಾಹಸಪಟ್ಟಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..

kolar
ಕೋಲಾರದಲ್ಲಿ ವರುಣನ ಆರ್ಭಟ

ಕೋಲಾರ :ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ. ನಗರದ ರಹಮತ್‌ನಗರ, ಶಾಂತಿನಗರ, ಕಾರಂಜಿಕಟ್ಟೆ, ಗಲ್‌ಪೇಟೆ ಪೊಲೀಸ್ ವಸತಿ ಗೃಹದ ಮುಖ್ಯ ರಸ್ತೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.

ಕೋಲಾರದಲ್ಲಿ ವರುಣನ ಆರ್ಭಟ

ರಾತ್ರಿ ಇಡೀ ನಿದ್ದೆಯಿಲ್ಲದೆ ಮನೆಗಳೊಳಗೆ ಬರುತ್ತಿದ್ದ ಮಳೆ ನೀರನ್ನ ಹೊರ ಹಾಕಲು ನಿವಾಸಿಗಳು ಹರಸಾಹಸಪಟ್ಟಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಮಳೆ ನೀರಿನ ಜೊತೆಗೆ ಚರಂಡಿಗಳಲ್ಲಿರುವ ತ್ಯಾಜ್ಯದ ನೀರು ಸಹ ಮನೆಯೊಳಗೆ ಬಂದಿದ್ದು, ಇಲ್ಲಿನ ಜನರು ರಾತ್ರಿಯಿಡೀ ನಿದ್ದೆಯಿಲ್ಲದೆ ಪರದಾಡಿದ್ದಾರೆ.

ಇದನ್ನೂ ಓದಿ:ಮಿನಿಷ್ಟ್ರೇನು_____.. ಶೂ ಒದ್ದೆಯಾಗುತ್ತೆ ಅಂತಾ ಹೀಗೆ ಮಾಡೋದಾ.. ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ!?

ABOUT THE AUTHOR

...view details