ಕೊಡಗು:ಹುಲಿ ದಾಳಿ ಮಾಡಿ ಕರುವನ್ನು ಗಾಯಗೊಳಿಸಿರುವ ಘಟನೆ ಮತ್ತೆ ಜಿಲ್ಲೆಯಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪ ಸುಳುಗೋಡುವಿನ ಆದೇಂಗಡ ಧನು ಪೊನ್ನಪ್ಪ ಎಂಬುವರಿಗೆ ಸೇರಿದ ಕರುವಿನ ಮೇಲೆ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹುಲಿಯೊಂದು ದಾಳಿ ಮಾಡಿದೆ.
ಸಣ್ಣ-ಪುಟ್ಟ ಗಾಯವಾಗಿದ್ದರೂ ಕರುವಿನ ಮೂಗಿನಲ್ಲಿ ರಕ್ತ ಸುರಿಯಲಾರಂಭಿಸಿದ್ದನ್ನು ಗಮನಿಸಿದ ಬಳಿಕ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಎರಡು ತಿಂಗಳ ಹಿಂದೆ ಮೂರು ಜನರನ್ನು ಬಲಿ ತೆಗೆದುಕೊಂಡು ಹಲವು ಹಸುಗಳನ್ನು ಕೊಂದಿರುವಹುಲಿಯನ್ನು ಅರಣ್ಯ ಇಲಾಖೆ ಬೇಟೆಯಾಡಿತ್ತು. ಇದೀಗ ಮತ್ತೆ ಹುಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.