ಕರ್ನಾಟಕ

karnataka

ಕಲಬುರಗಿ: ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕರು ಸಾವು, ಮತ್ತಿಬ್ಬರಿಗೆ ಗಾಯ

By

Published : Oct 5, 2021, 4:41 PM IST

Updated : Oct 5, 2021, 4:59 PM IST

‌ಗುಡುಗು ಸಿಡಿಲು ಸಹಿತ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕ ಸಾವು
ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕ ಸಾವು

ಕಲಬುರಗಿ: ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ನಡೆದಿದೆ.

ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕ ಸಾವು
ಸಿಡಿಲು ಬಡಿದು ಇಬ್ಬರು ಕೃಷಿ ಕೂಲಿಕಾರ್ಮಿಕ ಸಾವು

‌ಗುಡುಗು ಸಿಡಿಲು ಸಹಿತ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಕೃಷಿ ಕಾರ್ಮಿಕರು ಮೃತಪಟ್ಟಿದ್ದಾರೆ. ಬಳವಡಗಿ ಗ್ರಾಮದ ನಿವಾಸಿಗಳಾದ ರಾಜ್ಆಹ್ಮದ (42) ಹಾಗೂ ಜಬ್ಬಾರ್ (55) ಎಂಬುವರು ಮೃತ ಕೂಲಿ ಕಾರ್ಮಿಕರು. ಗ್ರಾಮದ ವಿಶ್ವನಾಥರೆಡ್ಡಿ ಮಾಲಿ ಪಾಟೀಲ ಎಂಬುವರಿಗೆ ಸೇರಿದ ಹೊಲದಲ್ಲಿ ಕೆಲಸ ಮಾಡುವಾಗಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯವಾಗಿದ್ದು ಅವರನ್ನು ವಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಲಿಕಾರ್ಜುನ ಹಾಗೂ ಮಲ್ಲಪ್ಪ ಗಾಯಗೊಂಡ ಕೃಷಿಕರು.

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Oct 5, 2021, 4:59 PM IST

ABOUT THE AUTHOR

...view details