ಕರ್ನಾಟಕ

karnataka

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಸ್ಥಳದಲ್ಲೇ ₹5 ಲಕ್ಷ ಪರಿಹಾರ, ವಿಧವಾ ವೇತನದ ಮಂಜೂರಾತಿ ಪತ್ರ ವಿತರಣೆ

By

Published : Jul 23, 2022, 11:02 PM IST

ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಸಮೀಪದ ಹಳ್ಳದಲ್ಲಿ ಕೊಚ್ಚಿ ಹೋಗಿ ಒಂದು ಕಿಲೋ ಮೀಟರ್​ನಷ್ಟು ದೂರದಲ್ಲಿ ಸಿಲುಕಿದ್ದ ವ್ಯಕ್ತಿಯ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಅಂತ್ಯಕ್ರಿಯೆಗೂ ಮುಂಚೆಯೇ ಮೃತನ ಪತ್ನಿಗೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ವಿಧವಾ ವೇತನದ ಮಂಜೂರಾತಿ ಪತ್ರ ನೀಡಲಾಗಿದೆ.

a-person-died-after-being-washed-away-in-a-ditch-in-kalaburagi
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಸ್ಥಳದಲ್ಲೇ 5 ಲಕ್ಷ ಪರಿಹಾರ, ವಿಧವಾ ವೇತನದ ಮಂಜೂರಾತಿ ಪತ್ರ ವಿತರಣೆ

ಕಲಬುರಗಿ: ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ಸಿದ್ದು ಕೆರಮಗಿ (36) ಎಂಬಾತ ಶನಿವಾರ ಶವವಾಗಿ ಪತ್ತೆಯಾಗಿದ್ದು, ಅಂತ್ಯಕ್ರಿಯೆಗೂ ಮುಂಚೆಯೇ ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿತ್ತು. ಈ ವೇಳೆ ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದ ಟಂಟಂ ವಾಹನ ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ಹೊರಟಿತ್ತು. ಆದರೆ, ಜೋರಾದ ಮಳೆಗೆ ಹಳ್ಳ ತುಂಬಿದರಿಂದ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಸ್ಥಳದಲ್ಲೇ 5 ಲಕ್ಷ ಪರಿಹಾರ, ವಿಧವಾ ವೇತನದ ಮಂಜೂರಾತಿ ಪತ್ರ ವಿತರಣೆ

ಟ್ರ್ಯಾಕ್ಟರ್ ಚಾಲಕ ಕಂಟಿಯೊಂದನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದ. ಆದರೆ, ಟ್ರ್ಯಾಕ್ಟರ್​ನಲ್ಲಿದ್ದ ಸಿದ್ದು ಕೆರಮಗಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಇತನ ಪತ್ತೆಗಾಗಿ ಶುಕ್ರವಾರ ರಾತ್ರಿಯಿಡೀ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಮೃತ ಸಿದ್ದು ಕೆರಮಗಿ ನಿವಾಸಕ್ಕೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಭೇಟಿ ನೀಡಿದರು. ಈ ವೇಳೆ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೂ ಮುಂಚೆಯೇ ಮೃತನ ಪತ್ನಿ ನಂದಿನಿ ಅವರಿಗೆ 5 ಲಕ್ಷ ರೂ. ಪರಿಹಾರ ವಿತರಿಸಿದರು. ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಿದ್ದಲ್ಲದೆ‌, ನಿರ್ಗತಿಕ ವಿಧವಾ ವೇತನದ ಮಂಜೂರಾತಿ ಪತ್ರ ಸಹ ನೀಡಿದ್ದಾರೆ.

ಈ ವೇಳೆ, ಕಲಬುರಗಿ ತಹಶೀಲ್ದಾರ್​ ಪ್ರಕಾಶ ಕುದರಿ ಸೇರಿದಂತೆ ಕಂದಾಯ‌ ನಿರೀಕ್ಷಕರು, ಗ್ರಾಮ‌ ಲೆಕ್ಕಾಧಿಕಾರಿಗಳು ಮುಂತಾದವರಿದ್ದರು. ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೀತು.

ಇದನ್ನೂ ಓದಿ:ಹಾವೇರಿ: ಮಳೆಗಾಲದಲ್ಲಿ ಮುಳುಗುತ್ತೆ ಸೇತುವೆ.. ಸಂಚಾರಕ್ಕಾಗಿ ಗ್ರಾಮಸ್ಥರ ಪರದಾಟ!

ABOUT THE AUTHOR

...view details