ಕರ್ನಾಟಕ

karnataka

ಸಾಲದ ಶೂಲಕ್ಕೆ ಸಿಲುಕದಿರಿ.. ಇಲ್ಲೊಬ್ಬ ಬರೇ 4 ಸಾವಿರ ರೂಪಾಯಿಗೆ ಸ್ನೇಹಿತನ ಪ್ರಾಣ ತೆಗೆದ!

By

Published : Jun 29, 2021, 6:48 AM IST

ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ತಗಾದೆ ತೆಗೆದು ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Man Killed his friend
ಹಣಕ್ಕಾಗಿ ಸ್ನೇಹಿತನ ಕೊಲೆ

ಕಲಬುರಗಿ: ಕೇವಲ ನಾಲ್ಕು ಸಾವಿರ ರೂಪಾಯಿಗಾಗಿ ವ್ಯಕ್ತಿಯೋರ್ವ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ-ಆಲಗೂಡ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಕಲಬುರಗಿಯ ರಾಮನಗರ ನಿವಾಸಿ ಸಂತೋಷ ಹೂಗಾರ್ (28) ಕೊಲೆಯಾದ ಯುವಕ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಂತೋಷ ಹೂಗಾರ್​ನನ್ನು ಕೊಲೆ ಮಾಡಿರುವುದು

ಈತ ತನ್ನ ಸ್ನೇಹಿತ ಶಿವಾಜಿಗೆ 4 ಸಾವಿರ ರೂ. ಸಾಲವಾಗಿ ಕೊಟ್ಟಿದ್ದನಂತೆ. ಈ ಹಣವನ್ನು ತಿಂಗಳುಗಳೇ ಉರುಳಿದರೂ ಆತ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ, ಹಣ ಕೊಡುವಂತೆ ಸಂತೋಷ್ ಶಿವಾಜಿಯನ್ನು ಕೇಳಿದ್ದಾನೆ. ಹಣ ಕೊಡದಿದ್ದರೆ ಹುಡುಗರಿಂದ ಹೊಡೆಸುವುದಾಗಿ ಹೆದರಿಸಿದ್ದನಂತೆ.

ಇದರಿಂದ ಕೋಪಗೊಂಡ ಶಿವಾಜಿ, ತನ್ನ ಇನ್ನೊಬ್ಬ ಸ್ನೇಹಿತ ಅರುಣಕುಮಾರನೊಂದಿಗೆ ಸೇರಿ ಸಂತೋಷನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಡಾಬಾವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ.

ಇದನ್ನೂಓದಿ: ದುಬಾರಿ ನಾಯಿಗಳನ್ನು ಕದ್ದು ವಾಟ್ಸಪ್​ ಮೂಲಕ ತಗಾಲಾಕ್ಕೊಂಡ ಕಳ್ಳರು..!

ನಂತರ ಅವರಾದ - ಆಲಗೂಡ ರಸ್ತೆಗೆ ಆಟೋದಲ್ಲಿಯೇ ಕರೆದುಕೊಂಡು ಹೋಗಿ ಜಗಳ ತೆಗೆದು, ಮುಖ ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಹಾಗೂ ಪೊಲೀಸ್ ಅಧಿಕಾರಿಗಳಾದ ಶ್ರೀಕಾಂತ ಕಟ್ಟಿಮನಿ, ಜೆ.ಹೆಚ್ ಇನಾಮದಾರ್, ಪಿಎಸ್ಐ ಕವಿತಾ ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ABOUT THE AUTHOR

...view details