ಕರ್ನಾಟಕ

karnataka

ಮಳೆಯಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ನೆರವು, ಸಚಿವ ಬೊಮ್ಮಾಯಿ ಭರವಸೆ

By

Published : Aug 8, 2020, 3:07 PM IST

ಸಂಸದ ಶಿವಕುಮಾರ್ ಉದಾಸಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖುದ್ದು ಫಲಾನುಭವಿಗಳಿಗೆ ಭರವಸೆ ನೀಡುವುದರ ಜೊತೆಗೆ ಧೈರ್ಯ ತುಂಬಿದರು..

Basavaraja bommai
Basavaraja bommai

ಹಾನಗಲ್ :ಮಳೆಯಿಂದ ಹಾನಿಯಾದ ಮನೆಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಹಾನಗಲ್ ತಾಲೂಕಿನ ನರೇಗಲ್, ಕೂಡಲ ಗ್ರಾಮಗಳ ಮನೆಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿದೆ. ಎಷ್ಟೋ ಜನರು ಮನೆಗಳನ್ನ ಕಳೆದುಕೊಂಡಿದ್ದಾರೆ. ಇಂತಹ ಫಲಾನುಭವಿಗಳಿಗೆ ಸರ್ಕಾರ ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸಲು ಮುಂದಾಗಿದೆ ಎಂದು ವಿವರಿಸಿದರು.

ಸಂಸದ ಶಿವಕುಮಾರ್ ಉದಾಸಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖುದ್ದು ಫಲಾನುಭವಿಗಳಿಗೆ ಭರವಸೆ ನೀಡುವುದರ ಜೊತೆಗೆ ಧೈರ್ಯ ತುಂಬಿದರು.

ABOUT THE AUTHOR

...view details