ಕರ್ನಾಟಕ

karnataka

ಫಸಲು ನೀಡದ ಮಾವು: ನೂರಾರು ಗಿಡಗಳನ್ನು ಕಡಿದು ಹಾಕಿದ ರೈತ!

By

Published : Apr 9, 2020, 5:58 PM IST

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವಿನ ಸಸಿಗಳನ್ನು ಎಂಟು ವರ್ಷಗಳಿಂದ ಬೆಳೆಸಿದ್ದರು. ಇದರಿಂದ ಫಸಲು ಬಾರದ ಕಾರಣ ಗಿಡಗಳನ್ನು ಕಡಿದು ಹಾಕಿದ್ದಾರೆ.

Farmer who steals mango plants in haveri
ಫಸಲು ನೀಡದ ಮಾವು

ಹಾನಗಲ್: ಫಸಲು ಬಾರದ ಹಿನ್ನೆಲೆ ಎಂಟು ಎಕರೆ ಜಮೀನಿನಲ್ಲಿ ಬೆಳೆದ ಮಾವಿನ ಗಿಡಗಳನ್ನು ರೈತ ಕಡಿದು ಹಾಕಿದ್ದಾನೆ.

ಫಸಲು ನೀಡದ ಮಾವು

ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಗುಡ್ಡನಗೌಡ ಹೊಸಗೌಡ್ರ ಎಂಬ ರೈತ ಎಳೆಂಟು ವರ್ಷಗಳಿಂದ ಬೆಳೆಸಿದ್ದ ಮಾವಿನ ಗಿಡಗಳು ಫಸಲು ನೀಡಿರಲಿಲ್ಲ. ಇದರಿಂದ ಬೇಸತ್ತ ರೈತ ಎಲ್ಲಾ ಗಿಡಗಳನ್ನು ಕಡಿದು ಹಾಕಿದ್ದಾನೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಗಿಡಗಳು ಈಗ ನೆಲಕಚ್ಚಿವೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿದ್ದಾನೆ.

ABOUT THE AUTHOR

...view details