ಕರ್ನಾಟಕ

karnataka

ಬೊಮ್ಮಾಯಿ ಹಿಂದೆ ಸೂತ್ರಧಾರಿ ಇದ್ದಾರೆ, ಸರ್ಕಾರಕ್ಕೆ ಯಾವುದೇ ಕಂಟಕವಿಲ್ಲ: ಕೋಡಿಶ್ರೀ ಭವಿಷ್ಯ

By

Published : Sep 9, 2021, 5:57 PM IST

kodishri-bhavishyavani

ಸ್ವಾಮೀಜಿಗಳ ಮಾತನ್ನು ಧಿಕ್ಕರಿಸಿ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಸದ್ಯದಲ್ಲೇ ಅದರ ಫಲವನ್ನು ಅವರು ಉಣ್ಣುತ್ತಾರೆ. ಸೂತ್ರಧಾರಿ ಯಡಿಯೂರಪ್ಪನವರು ಇರುವವರೆಗೂ, ಬೊಮ್ಮಾಯಿ ಸರ್ಕಾರಕ್ಕೆ ಯಾವುದೇ ಸಂಕಷ್ಟ ಎದುರಾಗದು ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಹಾಸನ:ಸ್ವಾಮೀಜಿಗಳ ಮಾತನ್ನು ಧಿಕ್ಕರಿಸಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಸದ್ಯದಲ್ಲೇ ಅದರ ಫಲವನ್ನು ಅವರು ಉಣ್ಣುತ್ತಾರೆ. ಬೊಮ್ಮಾಯಿ ಹಿಂದೆ ಸೂತ್ರಧಾರಿ ಯಡಿಯೂರಪ್ಪನವರು ಇದ್ದಾರೆ. ಸರ್ಕಾರಕ್ಕೆ ಏನೂ ತೊಂದರೆ ಇಲ್ಲ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಬೊಮ್ಮಾಯಿ ಹಿಂದೆ ಸೂತ್ರಧಾರಿ ಇದ್ದಾರೆ, ಸರ್ಕಾರಕ್ಕೆ ಯಾವುದೇ ಕಂಟಕವಿಲ್ಲ

ಮಾಡಾಳು ಗೌರಮ್ಮನ ನಿಮಜ್ಜನಾ ಕಾರ್ಯಕ್ರಮದ ಬಳಿಕ ಬಿಎಸ್​ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಭಾರತ ಸಾಧು ಸಂತರನ್ನ, ಪೂಜೆ ವಿಧಿ-ವಿಧಾನ, ಜಪ-ತಪಗಳನ್ನು ನಂಬಿರುವ ದೇಶ. ಸ್ವಾಮೀಜಿಗಳು ಯಡಿಯೂರಪ್ಪರನ್ನ ಉಳಿಸಿ ಅಂತ ಬಂದಿದ್ದಿಲ್ಲ. ಕೊರೊನಾ ಕೆಟ್ಟ ಕಾಲದಲ್ಲಿ ಅವರನ್ನ ಕೆಳಗಿಳಿಸೋದು ಬೇಡ ಅಂತ ಕೇಳಲು ಬೆಂಗಳೂರಿಗೆ ಬಂದಿದ್ದೆವು. ಆದರೆ ಸ್ವಾಮೀಜಿ ಮಾತುಗಳನ್ನ ಧಿಕ್ಕರಿಸಲಾಗಿದೆ ಎಂದರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಸಂಕಷ್ಟ ಎದುರಾಗಲಿದೆ. ಅದು ಹೇಗೆ ಅಂತ ಈಗ ಹೇಳಲ್ಲ ಎಲ್ಲಾ ಕಾದು ನೋಡಿ ಎಂದು ಬಿಜೆಪಿ ಹೈಕಮಾಂಡ್​ಗೆ ಕೆಟ್ಟದಿನಗಳು ಕಾದಿವೆ ಎಂಬ ಸೂಚನೆ ನೀಡಿದರು. ಅಲ್ಲದೆ, ಸೂತ್ರಧಾರಿ ಯಡಿಯೂರಪ್ಪನವರು ಇರುವವರೆಗೂ, ಬೊಮ್ಮಾಯಿ ಎನ್ನುಯಿ ಬೊಂಬೆ ಕುಣಿಯುತ್ತದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನುಡಿದರು.

ನಿಜವಾಯ್ತು ಕೋಡಿಶ್ರೀಗಳ ಭವಿಷ್ಯ: ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಆಪತ್ತು ಕಾಡಲಿದೆ. ಭೂಮಿ ನಡುಗಲಿದೆ. ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ. ಒಂದೂವರೆ ವರ್ಷದ ಹಿಂದೆ ದೇಶವೊಂದು ಭೂಪಟದಿಂದ ಕಾಣೆಯಾಗುವ ಭವಿಷ್ಯ ಹೇಳಿದ್ದೆ. ಈಗ ಅಫ್ಘಾನಿಸ್ತಾನ ಅಳಿಸಿ ಹೋಯಿತು ಎಂದು ನೆನಪಿಸಿಕೊಂಡ ಅವರು. ಆ ಭಯ ಜಗತ್ತಿನಾದ್ಯಂತ ಇದೆ, ಇನ್ನೂ ಹೆಚ್ಚಲಿದೆ. ಅಫ್ಘಾನಿಸ್ತಾನದಿಂದ ಇಡೀ ಜಗತ್ತಿಗೆ ಭಯ ಇದೆ ಎಂದು ಅವರು ಎಚ್ಚರಿಕೆy ಭವಿಷ್ಯ ನುಡಿದರು.

ಮುಂದಿನಗಳಲ್ಲಿ ಗಾಳಿ ಬೀಸಿ ಸಾವು ಹೆಚ್ಚಲಿದೆ: ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ. ಆತ್ಮಗಳು ಭಂಗವಾಗಿ ಕಾಡುತ್ತವೆ. ಮುಂದಿನ ದಿನಗಳಲ್ಲಿ ಗಾಳಿಯಾಗಿ ಬೀಸಿ ಸಾವು ಹೆಚ್ಚಲಿದೆ. ನಿಧಾನವಾದರೂ ಈ ಅಲೆ ಇನ್ನೂ 2-3 ವರ್ಷ ಇರಲಿದೆ. ಸರ್ಕಾರಕ್ಕೆ ತೊಂದರೆ ಆಗಲ್ಲ, ಸರ್ಕಾರ ಸುಭದ್ರವಾಗಿರಲಿದೆ ಎಂದರು.

ABOUT THE AUTHOR

...view details