ಕರ್ನಾಟಕ

karnataka

SSLC ಫಲಿತಾಂಶ: ಜಿಲ್ಲೆ ಫಸ್ಟ್​ ಬಂದಿರುವುದು ಖುಷಿ ತಂದಿದೆ : ಭವಾನಿ ರೇವಣ್ಣ

By

Published : May 13, 2019, 10:55 AM IST

ಎಸ್​ಎಸ್​ಎಲ್​​​ಸಿ ಫಲಿತಾಂಶದಲ್ಲಿ ಹಾಸನಕ್ಕೆ ಮೊದಲ ಸ್ಥಾನ ಸಿಕ್ಕಿದ್ದು ಖುಷಿ ತಂದಿದೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ. ನಾನು ಹಾಕಿಕೊಂಡಿದ್ದ ಕಾರ್ಯಕ್ರಮಗಳಿಗೆ ತಕ್ಕಂತೆ ಫಲಿತಾಂಶವನ್ನು ಆ ಭಗವಂತ ಕೊಟ್ಟಿದ್ದಾನೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಫಲಿತಾಂಶದಲ್ಲಿ ಮೊದಲಸ್ಥಾನ ಬಂದಿರುವುದು ಖುಷಿ ತಂದಿದೆ : ಭವಾನಿ ರೇವಣ್ಣ

ಹಾಸನ: ಎಸ್​ಎಸ್​ಎಲ್​​​ಸಿ ಫಲಿತಾಂಶದಲ್ಲಿ ಹಾಸನಕ್ಕೆ ಮೊದಲ ಸ್ಥಾನ ಸಿಕ್ಕಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಮೊದಲ ಸ್ಥಾನ ಬಂದಿರುವುದು ನಿಜಕ್ಕೂ ಖುಷಿ ತಂದಿದೆ. ನಾನು ಹಾಕಿಕೊಂಡಿದ್ದ ಕಾರ್ಯಕ್ರಮಗಳಿಗೆ ತಕ್ಕಂತೆ ಫಲಿತಾಂಶವನ್ನು ಭಗವಂತ ಕೊಟ್ಟಿದ್ದಾನೆ ಎಂದರು.

ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಕ್ಕೆ ಬರಲು ನನ್ನ ಪತ್ನಿ ಭವಾನಿಯೇ ಕಾರಣ ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದರು. ಇದನ್ನು ಸಮರ್ಥಿಸಿಕೊಂಡಿರುವ ರೇವಣ್ನ ಪತ್ನಿ ಭವಾನಿ ರೇವಣ್ಣ, ಯಾರು ಏನೇ ಅನ್ನಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಫಲಿತಾಂಶದ ಬಗ್ಗೆ ಪ್ರಯತ್ನ ಪಟ್ಟವರಿಗೆ ಮಾತ್ರ ಅದರ ಕಷ್ಟ ಏನೆಂದು ತಿಳಿದಿರುತ್ತದೆ ಎಂದು ಹೇಳಿದರು.

ಭವಾನಿ ರೇವಣ್ಣ

ಇನ್ನು ನಾನು ಮಾಡಿದ ಸಭೆಗಳಲ್ಲಿ ಜಿಲ್ಲೆಯ ಕೆಲವು ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು. ಅವರಿಗೆ ಗೊತ್ತಿದೆ ಎಸ್ ಎಸ್ ಎಲ್ ಸಿ ಫಲಿತಾಂಶ ಬರುವುದಕ್ಕೆ ಯಾರು ಕಾರಣ ಎಂದು. ಮೂರು ವರ್ಷಗಳ ಹಿಂದೆ 31ನೇ ಸ್ಥಾನದಲ್ಲಿದ್ದ ಜಿಲ್ಲೆ ಕಳೆದ ವರ್ಷ ಏಳನೇ ಸ್ಥಾನಕ್ಕೆ ಬಂದಿತ್ತು. ಈ ಬಾರಿ ಮೊದಲ ಸ್ಥಾನ ಪಡೆದಿದೆ. ಇದು ನನಗೆ ಬಹಳ ಖುಷಿ ತಂದಿದೆ ಎಂದರು

ಈ ಫಲಿತಾಂಶಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಈ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ದೊಡ್ಡದು ಎಂದಿದ್ದಾರೆ ಭವಾನಿ ರೇವಣ್ಣ.

Intro:ಹಾಸನ: ಈ ಬಾರಿ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೆ ಏರಿದ ಎಸ್ ಎಸ್ ಎಲ್ ಸಿ ಫಲಿತಾಂಶ ನಿಜಕ್ಕೂ ಖುಷಿ ತಂದಿದೆ ನಾನು ಹಾಕಿಕೊಂಡಿದ್ದ ಕಾರ್ಯಕ್ರಮಗಳಿಗೆ ತಕ್ಕಂತೆ ಫಲಿತಾಂಶವನ್ನು ಭಗವಂತ ಕೊಟ್ಟಿದ್ದಾನೆ ಅಂತ ಪತಿ ರೇವಣ್ಣ ಪತ್ನಿಯನ್ನು ಸಮರ್ಥಿಸಿಕೊಂಡಿದ್ದ ಮಾತಿಗೆ ಭವಾನಿ ರೇವಣ್ಣ ಕೂಡ ಎಸ್ ಅಂದ್ರು.

ಹಾಸನದ ಹೊರವಲಯದಲ್ಲಿ ಮಾತನಾಡಿದ ಭವಾನಿ ರೇವಣ್ಣ ಯಾರು ಏನೇ ಅನ್ನಲಿ ಆದರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಫಲಿತಾಂಶ ಬರುವುದಕ್ಕೆ ಯಾರು ಏನೇ ಹೇಳಿಕೊಳ್ಳಲಿ ಪ್ರಯತ್ನ ಮಾಡಿದವರಿಗೆ ಅದು ಗೊತ್ತಿರುತ್ತೆ ಅಂತ ರೋಹಿಣಿ ಸಿಂಧೂರಿ ಮಾತುಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಇನ್ನು ನಾನು ಮಾಡಿದ ಸಭೆಗಳಿಗೆ ಜಿಲ್ಲೆಯ ಕೆಲವು ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ರು ಅವರಿಗೆ ಗೊತ್ತಿದೆ ಎಸ್ ಎಸ್ ಎಲ್ ಸಿ ಫಲಿತಾಂಶ ಬರುವುದಕ್ಕೆ ಯಾರು ಕಾರಣ ಅಂತ 3 ವರ್ಷಗಳ ಹಿಂದೆ 31ನೇ ಸ್ಥಾನದಿಂದ ಕಳೆದ ವರ್ಷ ಏಳನೇ ಸ್ಥಾನಕ್ಕೆ ಬಂದಿದ್ದು ಈ ಬಾರಿ ಮೊದಲ ಸ್ಥಾನ ಪಡೆದಿದೆ. ಇದು ನನಗೆ ಬಹಳ ಖುಷಿ ತಂದಿದೆ .ಇದಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ, ಈ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಹಾಗು ಮಕ್ಕಳ ಪ್ರಯತ್ನ ದೊಡ್ಡದು. ಇಡೀ ರಾಜ್ಯದಲ್ಲಿ ಪೋಷಕರ ಸಭೆ ಮಾಡಿದ್ದು ನಾವೇ ಮೊದಲು. ನಾನು ಸ್ವತಃ ಹಲವು ಸ್ವಯಂಪ್ರೇರಿತ ಕ್ರಮಗಳನ್ನ ಕೈಗೊಂಡಿದ್ದರಿಂದ ಪತಿ ರೇವಣ್ಣ ತಮ್ಮನ್ನು ಹೊಗಳಿದ್ದಾರೆ ಎನ್ನುವ ಮೂಲಕ ಫಲಿತಾಂಶಕ್ಕೆ ನನ್ನ ಶ್ರಮ ಬಹಳಷ್ಟಿದೆ ಎಂದು ಸಮರ್ಥನೆ ಮಾಡಿಕೊಂಡ್ರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬಂದ ವೇಳೆ ಪತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣರನ್ನು ಪತ್ರಿಕಾಗೋಷ್ಠಿಯಲ್ಲಿ ಹೊಗಳಿ ಹಾಸನ ಜಿಲ್ಲೆಯ ಪ್ರಥಮ ಸ್ಥಾನ ಗಳಿಸಲು ನನ್ನ ಪತ್ನಿಯ ಕಾರಣ ಅಂತ ಹೇಳಿದ್ದಕ್ಕೆ ಇಂದು ಭವಾನಿ ರೇವಣ್ಣ ಸಮರ್ಥನೆ ಮಾಡಿಕೊಂಡರು.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

ABOUT THE AUTHOR

...view details