ಕರ್ನಾಟಕ

karnataka

ಯೋಗೇಶ್​​ ಗೌಡ ಕೊಲೆ ಪ್ರಕರಣ: ವಿಚಾರಣೆಗೆ ಹಾಜರಾದ ಪ್ರಮುಖ ಆರೋಪಿಗಳು

By

Published : Nov 11, 2020, 5:04 PM IST

ಯೋಗೇಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನಯ್​ ಕುಲಕರ್ಣಿ ಅವರನ್ನ ಈಗಾಗಲೇ ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಇದೀಗ ಇನ್ನಿತರ ಪ್ರಮುಖ ಆರೋಪಿಗಳನ್ನು ಠಾಣೆಗೆ ಕರೆಸಿ ಡ್ರಿಲ್​ ಮಾಡತೊಡಗಿದ್ದಾರೆ.

Yogesh Gowda Murder Case
ವಿಚಾರಣೆಗೆ ತೆರಳುತ್ತಿರುವ ಆರೋಪಿಗಳು

ಧಾರವಾಡ: ಜಿಲ್ಲಾ ಪಂಚಾಯತ್​​ ಸದಸ್ಯ ಯೋಗೇಶ್​​ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಬಸವರಾಜ್​ ಮುತ್ತಗಿ, ವಿನಾಯಕ ಕಟಗಿ, ಸಂದೀಪ‌ ಸವದತ್ತಿ, ವಿಕ್ರಮ ಬಳ್ಳಾರಿ, ಸಂತೋಷ ಸವದತ್ತಿ, ಮಹಾಬಲೇಶ್ವರ ಹೊಂಗಲ್, ಕೀರ್ತಿ ಇಂದು ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ.

ವಿಚಾರಣೆಗೆ ತೆರಳುತ್ತಿರುವ ಆರೋಪಿಗಳು

ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದು ಬೆಳಗ್ಗೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ವಿಚಾರಣೆ ನಡೆಸಲಾಗಿತ್ತು. ಇದೀಗ ಉಳಿದಂತೆ ಎಲ್ಲ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪುನಃ ಪ್ರಮುಖ ಆರೋಪಿ ಬಸವರಾಜ್​​ ಮುತ್ತಗಿ ಅವರನ್ನ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದ್ದು, ಈ ಎಲ್ಲ ಆರೋಪಿಗಳನ್ನು ಇದೀಗ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡ ತೊಡಗಿದ್ದಾರೆ.

ಯೋಗೇಶ್​​ ಗೌಡ ಕೊಲೆ ಪ್ರಕರಣದ ಈ ಎಲ್ಲ ಆರೋಪಿಗಳು ಇಷ್ಟು ದಿನಗಳ ಕಾಲ ಜಾಮೀನಿನ ಮೇಲೆ ಹೊರಗಡೆ ಇದ್ದರು.

ABOUT THE AUTHOR

...view details