ಕರ್ನಾಟಕ

karnataka

ಬಿಆರ್​ಟಿಎಸ್​​​ ಬಸ್​-ಬೈಕ್​​​ ನಡುವೆ ಡಿಕ್ಕಿ: ರಸ್ತೆ ತಡೆದು ಪ್ರತಿಭಟನೆ

By

Published : May 22, 2019, 2:53 PM IST

ಬೈಕ್​ ಸವಾರನಿಗೆ ಬಿಆರ್​ಟಿಸ್​ ಬಸ್​ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಿಆರ್​ಟಿಎಸ್​ ಬಸ್​-ಬೈಕ್​ ನಡುವೆ ಡಿಕ್ಕಿ

ಧಾರವಾಡ:ಬಿಆರ್​ಟಿಎಸ್​​ ಚಿಗರಿ‌ ಹುಬ್ಬಳ್ಳಿ-ಧಾರವಾಡಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರ ಸೃಷ್ಟಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು ಮತ್ತೊಂದು ಅವಾಂತರ ಸೃಷ್ಟಿ ಮಾಡಿಕೊಂಡಿದೆ.

ಬಿಆರ್​ಟಿಎಸ್​ ಬಸ್​-ಬೈಕ್​ ನಡುವೆ ಡಿಕ್ಕಿ

ಹುಬ್ಬಳ್ಳಿ-ಧಾರವಾಡ ಮಾರ್ಗ ಮಧ್ಯೆ ಇರುವ ಎಪಿಎಂಸಿ ಮೂರನೇ ಗೇಟಿನ ಹತ್ತಿರ ರಸ್ತೆ ದಾಟುವಾಗ ಬಿಆರ್​ಟಿಎಸ್​ ಚಿಗರಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡಿರುವ ವ್ಯಕ್ತಿಯನ್ನು ಪಾಂಡು ಪೂಜಾರ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್​ ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಚಿಗರಿ ಬಸ್​ನಿಂದ ಈಗಾಗಲೇ ಹಲವು ರಸ್ತೆ ಅಪಘಾತಗಳಾಗಿದ್ದು, ರಸ್ತೆ ದಾಟುವಾಗ ಇಂತಹ ಅವಾಂತರ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Intro:ಧಾರವಾಡ:ಬಿ.ಆರ್.ಟಿ.ಎಸ್ ಚಿಗರಿ‌ ಹುಬ್ಬಳ್ಳಿ ಧಾರವಾಡಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರ ಸೃಷ್ಟಿಸಿಕೊಳ್ಳುತ್ತಿದೆ ಇದಕ್ಕೆ ಪೂರಕವೆಂಬಂತೆ ಇಂದು ಮತ್ತೊಂದು ಅವಾಂತರ ಸೃಷ್ಟಿ ಮಾಡಿಕೊಂಡಿದೆ.

ಹುಬ್ಬಳ್ಳಿ ಧಾರವಾಡ ಮಾರ್ಗಮಧ್ಯೆ ಇರುವ ಎಪಿಎಂಸಿ ಮೂರನೇ ಗೇಟಿನ ಹತ್ತಿರ ರಸ್ತೆ ದಾಟುವಾಗ ಬಿಆರ್ಟಿಎಸ್ ಚಿಗರಿ ಬಸ್ ಬೈಕ್ ಸವಾರನಿಗೆ ಗುದ್ದಿದೆ

ಗಾಯಾಳು ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಪಾಂಡು ಪೂಜಾರ ಎಂದು ಗುರುತಿಸಲಾಗಿದೆ.Body:ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕೆಲವೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ, ಚಿಗರಿ ಬಸ್ ನಿಂದ ಸುಮಾರು ಜನರಿಗೆ ಈಗಾಗಲೇ ರಸ್ತೆ ಅಪಘಾತಗಳಾಗಿದ್ದು ರಸ್ತೆ ದಾಟುವಾಗ ಇಂತಹ ಅವಾಂತರ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.Conclusion:

TAGGED:

ABOUT THE AUTHOR

...view details