ಕರ್ನಾಟಕ

karnataka

ಕುಮಾರಸ್ವಾಮಿ ಕುರುಡ, ಆನೆಯ ಬಾಲ ಮುಟ್ಟಿ ಅದೇ ಆನೆ ಅಂದ್ಕೊಂಡಿದ್ದಾರೆ : ಸಚಿವ ಆರ್.ಅಶೋಕ್ ವ್ಯಂಗ್ಯ

By

Published : Oct 16, 2021, 4:28 PM IST

ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಕಚ್ಚಾಟ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಕಚ್ಚಾಟವಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ..

ಆರ್.ಅಶೋಕ್
ಆರ್.ಅಶೋಕ್

ದಾವಣಗೆರೆ :ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಆರ್​ಎಸ್​​ಎಸ್ ಗಂಧ ಗಾಳಿಯೂ ಗೊತ್ತಿಲ್ಲ. ಯಾವುದೋ‌ ಒಂದು ಪುಸ್ತಕ ಓದಿಕೊಂಡು ಅದೇ ಸತ್ಯ ಅಂದುಕೊಂಡರೆ ಹೇಗೆ? ಎಂದು ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಕಂದಾಯ ಸಚಿವ ಆರ್.ಆಶೋಕ್ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿರುವುದು..

ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಕುರುಡ. ಆನೆಯ ಬಾಲ ಮುಟ್ಟಿ ಅದೇ ಆನೆ ಎಂದು ಕೊಂಡಿದ್ದಾರೆ. ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ಅಲ್ಪಸಂಖ್ಯಾತರ ಮತಗಳಿಗೆ‌ ಪೈಪೋಟಿ‌ ಶುರುವಾಗಿದೆ.

ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಕಚ್ಚಾಟ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಕಚ್ಚಾಟವಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

‘ಒಂದೂವರೆ ವರ್ಷ ಬೊಮ್ಮಾಯಿಯವರೇ ಸಿಎಂ’

ಬೊಮ್ಮಾಯಿಯವರೇ ಒಂದೂವರೆ ವರ್ಷ ಸಿಎಂ ಆಗಿರುತ್ತಾರೆ. ಅವರ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆ ನಡಯಲಿದೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಗಳ ಕಡೆ ಮಾತ್ರವಲ್ಲ, ಸರ್ಕಾರವೇ ಹಳ್ಳಿಗಳ ಕಡೆಗೆ ಹೋಗಬೇಕು: CM ಬೊಮ್ಮಾಯಿ

ABOUT THE AUTHOR

...view details