ದಾವಣಗೆರೆ:ಖಾಸಗಿ ಕಂಪನಿಯೊಂದರ ವಸ್ತುಗಳನ್ನು ಆನ್ಲೈನ್ ಮುಖೇನಾ ಖರೀದಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ ಒಡ್ಡಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಬರೋಬ್ಬರಿ 18.66 ಲಕ್ಷ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ಕೆಕೆ ಕಾಲೋನಿ ನಿವಾಸಿ ಜ್ಯೋತಿ ಎಂಬ ಮಹಿಳೆ ಹಣ ಕಳೆದುಕೊಂಡವರು.
ಹಣ ಕಳೆದುಕೊಂಡ ಜ್ಯೋತಿಯವರಿಗೆ ಈ ಹಿಂದೆ ಆರೋಪಿ ದೂರವಾಣಿ ಕರೆ ಮಾಡಿದ್ದಾನೆ. ಖಾಸಗಿ ಕಂಪನಿಯ ಹೆಸರು ಹೇಳಿ ಕಂಪನಿಯ ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ ಒಡ್ಡಿದ್ದರು. ಕಮಿಷನ್ ಆಸೆಗೆ ಬಿದ್ದ ಜ್ಯೋತಿ ಹಣದ ಆಮಿಷಕ್ಕೆ ಒಳಗಾಗಿ ಬರೋಬ್ಬರಿ 18.66 ಲಕ್ಷವನ್ನು ಕಳೆದುಕೊಂಡಿದ್ದಾರೆ.
ಇನ್ನು ಆರೋಪಿ ತಾನು ಸಂಸ್ಥೆಯೊಂದರ ಮ್ಯಾನೇಜರ್ ಎಂದು ಹೇಳಿಕೊಂಡು ಕಮಿಷನ್ ಕೊಡುವುದಾಗಿ ನಂಬಿಸಿ ಜ್ಯೋತಿ ಅವರಿಂದ ಆನ್ಲೈನ್ ಮೂಲಕ ಆರೋಪಿ (ಹೆಸರು ತಿಳಿದು ಬಂದಿಲ್ಲ) ಜುಲೈ 01 ರಿಂದ ಜುಲೈ 11 ರ ತನಕ ಹಂತ ಹಂತವಾಗಿ 18.66 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಇನ್ನು ಆರಂಭದಲ್ಲಿ ಸ್ವಲ್ಪಮಟ್ಟಿಗೆ ಕಮಿಷನ್ ಹಣ ಎಂದು ಆರೋಪಿ ಜ್ಯೋತಿ ಅವರಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಜ್ಯೋತಿಯವರು ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನಿಶಾ ನರಸಪ್ಪ ವಿರುದ್ದ 30ಕ್ಕೂ ಹೆಚ್ಚು ಜನರಿಂದ ದೂರು: ಪುನೀತ್, ಶಿವರಾಜ್ಕುಮಾರ್ ಹೆಸರಲ್ಲೂ ವಂಚನೆ