ಕರ್ನಾಟಕ

karnataka

SDPIನ 'ತಾಂಟ್ರೆ ನೀ ಬಾ ತಾಂಟ್‌' ರಿಯಾಜ್ ಪರಂಗಿಪೇಟೆ ಮನೆ ಮೇಲೆ ಎನ್‌ಐಎ ದಾಳಿ

By

Published : Sep 8, 2022, 10:48 AM IST

Updated : Sep 8, 2022, 12:53 PM IST

ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಇಂದು ಬೆಳಗ್ಗೆ ಬಂಟ್ವಾಳದಲ್ಲಿ ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆಯ ಮೇಲೆ ದಾಳಿ ನಡೆಸಿದರು.

NIA raids SDPI leader house  NIA raids SDPI leader house in Dakshina Kannada  NIA raids continue in Mangaluru  Praveen Nettaru murder case  ಎಸ್​ಡಿಪಿಐ ಮುಖಂಡ ಮನೆ ಮೇಲೆ ಎನ್​ಐಎ ದಾಳಿ  ಗೋ ಬ್ಯಾಕ್​ ಎನ್ನುತ್ತಿರುವ ಪ್ರತಿಭಟನೆಕಾರರು  ಎಸ್​ಡಿಪಿಐ ಮುಖಂಡ ಮನೆ ಮೇಲೆ ದಾಳಿ ಮಾಡಿರುವ ಎನ್​ಐಎ  ರಿಯಾಝ್ ಫರಂಗಿಪೇಟೆಗೆ ಎನ್​ಐಎ ಬೆಳ್ಳಂಬೆಳಗ್ಗೆ ಶಾಕ್  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ
ಎಸ್​ಡಿಪಿಐ ಮುಖಂಡ ಮನೆ ಮೇಲೆ ಎನ್​ಐಎ ದಾಳಿ

ಬಂಟ್ವಾಳ(ದಕ್ಷಿಣ ಕನ್ನಡ): ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆಯ ಮೇಲೆ ಇಂದು ಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಸಿ ರೋಡ್​ನ ಕೈಕಂಬದಲ್ಲಿರುವ ಮನೆಗೆ ತನಿಖಾ ತಂಡ ಆಗಮಿಸುತ್ತಿದ್ದಂತೆ ರಿಯಾಜ್ ಬೆಂಬಲಿಗರು ಜಮಾಯಿಸಿದ್ದು, ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆಯ ಮೇಲೆ ಇಂದು ಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ

ಎರಡು ದಿನಗಳ ಹಿಂದಷ್ಟೇ ಏಕಕಾಲದಲ್ಲಿ ಸುಮಾರು 33 ಕಡೆ ಎನ್​ಐಎ ದಾಳಿ ನಡೆಸಿತ್ತು. ಎಸ್​ಡಿಪಿಐ ಹಾಗೂ ಇತರ ಸಂಘಟನೆಗಳ ಪ್ರಮುಖರ ಮನೆಗಳಿಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ರಿಯಾಜ್​ ಪರಂಗಿಪೇಟೆ ಅವರು ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಗಮನ ಸೆಳೆದಿದ್ದರು. ಇವರ 'ತಾಂಟ್ರೆ ನೀ ಬಾ ತಾಂಟ್‌'(ತಾಕತ್ತಿದ್ದರೆ ಮುಟ್ಟಿ ನೋಡು) ಹೇಳಿಕೆ ಸಾಕಷ್ಟು ಟ್ರೋಲ್​ಗೂ ಒಳಗಾಗಿತ್ತು.

ಇದನ್ನೂ ಓದಿ:ಹರ್ಷ ಹತ್ಯೆ ಪ್ರಕರಣ.. ವಿಶೇಷ ಕೋರ್ಟ್​ಗೆ ಎನ್​​ಐಎ ಚಾರ್ಜ್​​ಶೀಟ್​: ಹಿಂದೂಗಳ ಮೇಲೆ ಹಂತರಿಕರಿಗೆ ಇದೆಯಂತೆ ದ್ವೇಷ

Last Updated :Sep 8, 2022, 12:53 PM IST

ABOUT THE AUTHOR

...view details