ಚಿಕ್ಕಮಗಳೂರು: 77 ಕಳ್ಳತನ ಪ್ರಕರಣಗಳಿಗೆ (theft cases) ಸಂಬಂಧಿಸಿದಂತೆ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು (chikmagalur police department) ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತನ್ನು ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ನಿನ್ನೆ ಜಿಲ್ಲಾ ಪೊಲೀಸ್ ಇಲಾಖೆ(district police department) ಹಮ್ಮಿಕೊಂಡಿತ್ತು.
ನಗದು ಸೇರಿದಂತೆ ಕಳೆದುಕೊಂಡಿದ್ದ ವಾಹನಗಳು, ವಸ್ತುಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟ ದೂರುದಾರರು ಬಂದಿದ್ದರು. ಖುದ್ದು ಚಿಕ್ಕಮಗಳೂರು ಎಸ್ಪಿ ಅಕ್ಷಯ್ (sp akshay) ಪ್ರತಿಯೊಬ್ಬರಿಗೆ ವಸ್ತುಗಳನ್ನು ಹಿಂದಿರುಗಿಸಿ ನೊಂದವರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದ್ರು.
ಮನೆಯಲ್ಲಿ ಇಲ್ಲದ ವೇಳೆ ಕಳ್ಳತನ, ದಾರಿಯಲ್ಲಿ ಹೋಗುತ್ತಿದ್ದಾಗ ಕಣ್ಣೆದುರೇ ನಡೆದ ಘಟನೆ, ನಡುರಾತ್ರಿಯಲ್ಲಿ ನಡೆದ ದರೋಡೆ ಹೀಗೆ ಹಲವು ಪ್ರಕರಣಗಳಲ್ಲಿ ಜನರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದರು. ಅವನ್ನೆಲ್ಲ ನಿನ್ನೆ ವಾಪಸ್ ಪಡೆದ್ರು.