ಕರ್ನಾಟಕ

karnataka

ದತ್ತಜಯಂತಿ ವೇಳೆ ರಸ್ತೆಯಲ್ಲಿ ಮೊಳೆ: ಎನ್‌ಐಎ ತನಿಖೆಗೆ ಆಗ್ರಹ

By

Published : Dec 16, 2022, 6:59 PM IST

Updated : Dec 16, 2022, 7:24 PM IST

ದತ್ತ ಜಯಂತಿಯ ಮೊದಲ ದಿನ ಮಹಿಳೆಯರು ಪೀಠಕ್ಕೆ ಹೋಗುವ ರಸ್ತೆಯಲ್ಲಿ ದುಷ್ಕರ್ಮಿಗಳು ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ವಾಹನ ಸೇರಿ ಐದಾರು ವಾಹನಗಳು ಪಂಚರ್ ಆಗಿದ್ದವು.

Sakaleshpur Raghu is the provincial co-ordinator of Bajrang Dal
ಬಜರಂಗದಳದ ಪ್ರಾಂತ ಸಹ ಸಂಯೋಜಕ ಸಕಲೇಶಪುರ ರಘು

ದತ್ತಜಯಂತಿ ವೇಳೆ ರಸ್ತೆಯಲ್ಲಿ ಮೊಳೆ ಹಾಕಿರುವ ಪ್ರಕರಣ

ಚಿಕ್ಕಮಗಳೂರು:ದತ್ತ ಜಯಂತಿ ಮೊದಲ ದಿನ ಮಹಿಳೆಯರು ಪೀಠಕ್ಕೆ ತೆರಳುವ ರಸ್ತೆಯಲ್ಲಿ ದುಷ್ಕರ್ಮಿಗಳು ಮೊಳೆಗಳನ್ನು ಚೆಲ್ಲಿರುವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ನಿಷೇಧಿತ ಪಿಎಫ್ಐ ಸಂಘಟನೆಗೆ ಸೇರಿದವರಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ನೀಡಬೇಕೆಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ಸಕಲೇಶಪುರ ರಘು ಒತ್ತಾಯಿಸಿದ್ದಾರೆ. ಆರೋಪಿಗಳಾದ ಮಹಮದ್ ಶಹಬಾಸ್, ವಾಹೀದ್ ಹುಸೇನ್ ಪಿ.ಎಫ್.ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ದೇಶದ್ರೋಹದ ಅಡಿ ಕೇಸ್ ದಾಖಲು ಮಾಡಬೇಕೆಂದು ಅವರು ಪೊಲೀಸರನ್ನು ಇದೇ ವೇಳೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕೃತಕ ಕಾವು ಪಡೆದು ಮೊಟ್ಟೆಗಳಿಂದ ಹೊರಬಂದ ಕೇರೆಹಾವಿನ ಮರಿಗಳು: ಸ್ನೇಕ್ ನಾಗೇಂದ್ರ ಕಾರ್ಯಕ್ಕೆ ಮೆಚ್ಚುಗೆ

Last Updated :Dec 16, 2022, 7:24 PM IST

ABOUT THE AUTHOR

...view details