ಚಿಕ್ಕಬಳ್ಳಾಪುರ:ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. 'ಮೋದಿ ಹೆಂಡತಿಯನ್ನು ನೋಡಿಕೊಳ್ಳಲಾಗದವರು, ಶ್ರೀರಾಮನ ಬಗ್ಗೆ ಮಾತಾನಾಡುವುದು ಸರಿಯಲ್ಲ' ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಬುರುಡುಗುಂಟೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ವೇಳೆ ಬಿಜೆಪಿ ವಿರುದ್ಧ ಉಗ್ರಪ್ಪ ಕಿಡಿಕಾರಿದ್ದಾರೆ.
ಪತ್ನಿಯನ್ನು ನೋಡಿಕೊಳ್ಳಲಾಗದ ಮೋದಿ ಶ್ರೀರಾಮನ ಬಗ್ಗೆ ಮಾತನಾಡಬಾರದು: ಉಗ್ರಪ್ಪ
ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮಾತನಾಡಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಪತ್ನಿಯನ್ನು ನೋಡಿಕೊಳ್ಳಲಾಗದ ಪ್ರಧಾನಿ ಮೋದಿಗೆ ರಾಮನ ಬಗ್ಗೆ ಮಾತನಾಡಬಾರದು ಎಂದರು.
ಪತ್ನಿಯನ್ನು ನೋಡಿಕೊಳ್ಳಲಾಗದ ಮೋದಿ ರಾಮನ ಬಗ್ಗೆ ಮಾತನಾಡಲು ನಾಲಾಯಕ್: ಉಗ್ರಪ್ಪ
ಕಾಂಗ್ರೆಸ್ನವರು ಯಾರಾದರೂ ಭ್ರಷ್ಟಾಚಾರ ಮಾಡಿದ್ರೆ ಒದ್ದು ಒಳಗೆ ಹಾಕಿ ಎಂದೂ ಬಿಜೆಪಿಯವರಿಗೆ ಇದೇ ಸಂದರ್ಭದಲ್ಲಿ ಉಗ್ರಪ್ಪ ಸವಾಲ್ ಹಾಕಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. 550 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದು ಪಿಎಸ್ಐ ಹುದ್ದೆಗೆ 80 ಲಕ್ಷ ರೂಪಾಯಿ ಲಂಚ ಪಡೆಯುತ್ತೀರಿ ಎಂದು ಸರ್ಕಾರದ ವಿರುದ್ಧ ಉಗ್ರಪ್ಪ ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ:ಮನೆ ನಿರ್ಮಾಣಕ್ಕೆ ಭೂಮಿ ಕಬಳಿಸಿದ ಆರೋಪದಲ್ಲಿ ಸಿಲುಕಿದ ಎಂ.ಪಿ.ರೇಣುಕಾಚಾರ್ಯ