ಕರ್ನಾಟಕ

karnataka

ಬಯಲಸೀಮೆಯಲ್ಲಿ ಚೆಂಡು ಹೂವಿಗಿಲ್ಲ ಬೇಡಿಕೆ... ರೈತರಿಗೆ ಕಡುಕಷ್ಟ

By

Published : Apr 2, 2020, 1:47 PM IST

Updated : Apr 2, 2020, 2:04 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಹೊರವಲಯದಲ್ಲಿ ಕೊರೊನಾ ಎಫೆಕ್ಟ್​​​ನಿಂದಾಗಿ ಚೆಂಡು ಹೂವನ್ನು ಟ್ರ್ಯಾಕ್ಟರ್ ನಲ್ಲಿ ರೋಟರಿ ಹಾಕುತ್ತಿದ್ದಾರೆ.

flower
ಕಟಾವಿಗೆ ಬಂದ ಚೆಂಡು ಹೂವು

ಚಿಕ್ಕಬಳ್ಳಾಪುರ:ಜಿಲ್ಲೆಯ ಗುಡಿಬಂಡೆ ಹೊರವಲಯದಲ್ಲಿ ರೈತ ಕೃಷ್ಣಪ್ಪ ಎಂಬುವರು 3 ಎಕರೆಯಲ್ಲಿ ಚೆಂಡು ಹೂ ಬೆಳೆದಿದ್ದರು. ಆದರೆ, ಕೊರೊನಾ ಎಫೆಕ್ಟ್​​​ನಿಂದಾಗಿ ಚೆಂಡು ಹೂವನ್ನು ಟ್ರ್ಯಾಕ್ಟರ್ ನಲ್ಲಿ ರೋಟರಿ ಹಾಕುತ್ತಿದ್ದಾರೆ.

ಚೆಂಡು ಹೂವಿಗೆ ಬೇಡಿಕೆ ಇಲ್ಲದೆ ರೈತರು ಗೋಳಾಡುತ್ತಿದ್ದಾರೆ.

ಕೊರೊನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಿರುವುದು ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅನ್ನದಾತರು ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೇ ಟ್ರ್ಯಾಕ್ಟರ್​ನಲ್ಲಿ ರೋಟರಿ ಮಾಡಿರುವ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ತಾಲೂಕಿನ ಹಲವೆಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಚೆಂಡು ಹೂವಿನ ಬೆಳೆಗೆ ಮಾರುಕಟ್ಟೆ ಇಲ್ಲದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಚೆಂಡು ಹೂವಿನಲ್ಲಿ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆಗಳು ಬಂದ್ ಆಗಿರುವ ಹಿನ್ನೆಲೆ, ರೈತರು ಹೂಗಳನ್ನು ಹಲವೆಡೆ ತಿಪ್ಪೆಗೆ ಬಿಸಾಡುತ್ತಿದ್ದಾರೆ.

ಇನ್ನು ಕೆಲವು ರೈತರು ಟ್ರ್ಯಾಕ್ಟರ್​ನಲ್ಲಿ ರೋಟರಿ ಹಾಕುತ್ತಿದ್ದರೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಹಿನ್ನೆಲೆ ಹೂ ಕೊಳ್ಳಲು ದಲ್ಲಾಳಿಗಳು ಕೂಡ ಬರುತ್ತಿಲ್ಲ.

Last Updated :Apr 2, 2020, 2:04 PM IST

ABOUT THE AUTHOR

...view details