ಕರ್ನಾಟಕ

karnataka

ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ಬೆಂಗಳೂರು ಯುವತಿ ಅಪಘಾತಕ್ಕೆ ಬಲಿ

By

Published : Sep 16, 2022, 6:51 PM IST

Kn_ckb

ಜಲಾಶಯ ನೋಡಿಕೊಂಡು ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲು ಬೆಂಗಳೂರಿನಿಂದ ಗೆಳೆಯನೊಂದಿಗೆ ಆಗಮಿಸಿದ್ದ ಯುವತಿ ಅಪಘಾತಕ್ಕೆ ಬಲಿಯಾಗಿರುವ ದುರ್ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ರಾಷ್ಟ್ರೀಯಹೆದ್ದಾರಿಲ್ಲಿ ನಡೆದಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಚೈತ್ರಾ (18) ಮೃತ ದುರ್ದೈವಿ. ಎಂಇಎಸ್ ಕಾಲೇಜಿನ ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಹೊಂಡಾ ಆಕ್ಸೆಸ್ ವಾಹನದಲ್ಲಿ ಚೈತ್ರಾ ಆಗಮಿಸಿದ್ದಳು. ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಿಕೊಂಡು ಬೆಂಗಳೂರಿನತ್ತ ವಾಪಾಸ್ಸಾಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚೈತ್ರಾ ಸ್ಥಳದಲ್ಲೇ ಅಸುನೀಗಿದ್ದಾರೆ.

ಇದನ್ನೂ ಓದಿ:ಒನ್ ವೇನಲ್ಲಿ ಹೋದ ದ್ವಿಚಕ್ರ ವಾಹನ... ಲಾರಿ ಹರಿದು ಸವಾರ ಸಾವು

ABOUT THE AUTHOR

...view details