ಚಾಮರಾಜನಗರ: ಕಾಡಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಹೋಟೆಲ್ ತಲುಪಿಸಿದ ಘಟನೆ ಕಳೆದ 16 ರಂದು ಚಾಮರಾಜನಗರ ತಾಲೂಕಿನ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬರುತ್ತಿದ್ದ ಕರಿಕಲ್ಲು ಉದ್ಯಮಿ ರೂಪೇಶ್ ಕುಮಾರ್ ರೆಡ್ಡಿ, ಅವರ ಮಗ ತೇಜಶ್ವರ್ ಹಾಗೂ ಚಾಲಕ ಕೇಶವ್ ಎಂಬುವರನ್ನು ಡಿಸಿಐಬಿ ಪಿಐ ಮಹಾದೇವಶೆಟ್ಟಿ ಮತ್ತು ತಂಡ ರಕ್ಷಿಸಿ ಮೂವರನ್ನು ಚಾಮರಾಜನಗರದ ಹೋಟೆಲ್ ಒಂದಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಏನಿದು ಘಟನೆ?: 17 ವರ್ಷದ ಮಗನೊಂದಿಗೆ ಪ್ರವಾಸಕ್ಕೆ ಬಂದಿದ್ದ ರೂಪೇಶ್ ಬಿ.ಆರ್. ಅವರು ಕೆ.ಗುಡಿಗೆ ತೆರಳುತ್ತಿರುವಾಗ ಜಿಂಕೆಯೊಂದನ್ನು ನೋಡಲು ಕಾರನ್ನು ರಿವರ್ಸ್ ತೆಗೆದಿದ್ದೇ ತಡ ಕಾರು ಹಳ್ಳದಲ್ಲಿ ಸಿಕ್ಕಿಕೊಂಡಿದೆ. ಸಂಜೆ 7.45 ರಿಂದ ಕಾರು ಹಳ್ಳಕ್ಕೆ ಇಳಿದಿದ್ದು, ಎಷ್ಟೇ ಪ್ರಯತ್ನಿಸಿದರೂ ಕಾರು ಮುಂದಕ್ಕೆ ಬಾರದಿದ್ದರಿಂದ ಕಾರ್ ಇಂಜಿನ್ ಆಫ್ ಮಾಡಿ ಬರೋಬ್ಬರಿ ಆರೂವರೆ ಗಂಟೆ ಕಾರಿನಲ್ಲೇ ಕಳೆದಿದ್ದಾರೆ.