ಕರ್ನಾಟಕ

karnataka

ಕೃಷಿ ಹೊಂಡ ನಿರ್ಮಿಸದೇ ಹಣ ಗುಳುಂ ಮಾಡಿದರೇ ಕೃಷಿ ಅಧಿಕಾರಿಗಳು?!

By

Published : Dec 19, 2019, 8:38 PM IST

ಕೃಷಿ ಹೊಂಡ ನಿರ್ಮಿಸದೆ ರೈತರ ಹೆಸರಿನಲ್ಲಿ ಸಹಾಯಧನ ಪಡೆದು ಕೃಷಿ ಅಧಿಕಾರಿಗಳು ಹಣ ಗುಳುಂ ಮಾಡಿರುವ ಆರೋಪಗಳು ಕೇಳಿ ಬಂದಿದೆ.

ಕೆ.ಕೆ.ರಂಗರಾಜು
Agriculture officer misused Farmers fonds

ಚಾಮರಾಜನಗರ: ಕೃಷಿ ಹೊಂಡ ನಿರ್ಮಿಸದೆ ರೈತರ ಹೆಸರಿನಲ್ಲಿ ಸಹಾಯಧನ ಪಡೆದು ಕೃಷಿ ಅಧಿಕಾರಿಗಳು ಹಣ ಗುಳುಂ ಮಾಡಿರುವ ಆರೋಪ ಕೇಳಿ ಬಂದಿದೆ.

ಸಹಾಯಧನ ಪಡೆದು ಕೃಷಿ ಅಧಿಕಾರಿಗಳು ಹಣ ಗುಳುಂ ಆಗಿರುವ ಆರೋಪ ಕೇಳಿ ಬಂದಿದೆ

ಕೆಲ ರೈತರಿಗೆ ಒಂದಿಷ್ಟು ಹಣನೀಡಿ ನಕಲಿ ಸಹಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿ ಬಳಿಕ ಅವರಿಂದಲೇ ಇಲಾಖೆ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆ.ಕೆ. ರಂಗರಾಜು ಗಂಭೀರ ಆರೋಪಿಸಿದ್ದಾರೆ. ಈ ಕುರಿತು ಮುಖ್ಯ ಜಾಗೃತಿ ಇಲಾಖೆ ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದಾರೆ.

95 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಈಗಾಗಲೇ ನಿರ್ಮಿಸಿರುವ ಕೃಷಿ ಹೊಂಡದ ಫೋಟೋ ತೆಗೆಸಿ ರೈತರ ಕಣ್ಣಿಗೆ ಮಣ್ಣೆರಚಿ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಕಳೆದ 6 ವರ್ಷಗಳಿಂದ ಈ ಅವ್ಯವಹಾರ ನಡೆದಿದ್ದು, ಕೃಷಿ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಸಂಬಂಧ ಕೂಡಲೇ ತನಿಖೆ ನಡೆಸಿ ಹಗರಣದಲ್ಲಿ ಪಾಲ್ಗೊಂಡವರನ್ನು ಅಮಾನತು ಮಾಡಬೇಕು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 60 ಸಾವಿರ ರೂ. ಸಹಾಯಧನ ನೀಡಲಿದ್ದು, 50 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ರಂಗರಾಜು ಆರೋಪಿಸಿದ್ದಾರೆ.

Intro:ಕೃಷಿ ಹೊಂಡ ಮಾಡದೇ ಹಣ ಗುಳುಂ ಮಾಡಿದರೇ ಕೃಷಿ ಅಧಿಕಾರಿಗಳು!?


ಚಾಮರಾಜನಗರ: ಕೃಷಿ ಹೊಂಡ ನಿರ್ಮಿಸದೇ ರೈತರ ಹೆಸರಿನಲ್ಲಿ ಸಹಾಯಧನ ಪಡೆದು ಕೃಷಿ ಅಧಿಕಾರಿಗಳು ಹಣ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ.

Body:ಕೆಲ ರೈತರಿಗೆ ಒಂದಿಷ್ಟು ಹಣನೀಡಿ ಫೋರ್ಜರಿ ಸಹಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿ ಬಳಿಕ ಅವರಿಂದಲೇ ಇಲಾಖೆ ಅಧಿಕಾರಿಗಳು ಹಣ ಪಡೆದಿದ್ದಾರೆಂದು ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆ.ಕೆ.ರಂಗರಾಜು ಗಂಭೀರ ಆರೋಪ ಮಾಡಿದ್ದು ಈ ಕುರಿತು ಮುಖ್ಯ ಜಾಗೃತಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

95 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಈಗಾಗಲೇ ನಿರ್ಮಿಸಿರುವ ಕೃಷಿ ಹೊಂಡದ ಫೋಟೋ ತೆಗೆಸಿ ರೈತರ ಕಣ್ಣಿಗೆ ಮಣ್ಣೆರಚಿ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.


ಕಳೆದ 6 ವರ್ಷಗಳಿಂದ ಈ ಅವ್ಯವಹಾರ ನಡೆದಿದ್ದು ಕೃಷಿ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಭಾಗಿಯಾಗಿದ್ದು ಈ ಸಂಬಂಧ ಕೂಡಲೆ ತನಿಖೆ ನಡೆಸಿ ಹಗರಣದಲ್ಲಿ ಪಾಲ್ಗೊಂಡವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 60 ಸಾವಿರ ರೂ. ಸಹಾಯಧನ ನೀಡಲಿದ್ದು 50 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. Conclusion:ಒಟ್ಟಿನಲ್ಲಿ ರೈತರ ಬಾಳು ಹಸನಾಗಬೇಕಾದ ಕೃಷಿ ಭಾಗ್ಯ ಅಧಿಕಾರಿಗಳ ಹೊಟ್ಟೆ ತುಂಬಿಸಿರುವಂತಾಗಿರುವುದು ವಿಪರ್ಯಾಸ.

ABOUT THE AUTHOR

...view details