ಕರ್ನಾಟಕ

karnataka

ಬೀದರ್ ಪೊಲೀಸರ ಬೇಟೆ: ನಾಲ್ವರು ಶ್ರೀಗಂಧ ಕಳ್ಳರ ಬಂಧನ

By

Published : Sep 10, 2020, 7:56 PM IST

ಶ್ರೀಗಂಧವನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರ ಬಗ್ಗೆ ಮಾಹಿತಿ ಪಡೆದ ಬೀದರ್ ಜಿಲ್ಲಾ ಪೊಲೀಸರು ದಾಳಿ ಮಾಡಿ ಮಾಲು ಸಮೇತ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Arrest of Four Sandalwood Robbers In Bidar
ನಾಲ್ವರು ಶ್ರೀಗಂಧ ಕಳ್ಳರ ಬಂಧನ

ಬೀದರ್: ಅಕ್ರಮವಾಗಿ ಶ್ರೀಗಂಧ ವ್ಯಾಪಾರ ಮಾಡುತ್ತಿದ್ದ ಜಾಲವೊಂದನ್ನು ಬೇಟೆಯಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 12 ಲಕ್ಷ ರೂ. ಮೌಲ್ಯದ ಶ್ರೀಗಂಧವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಔರಾದ್ ಪಟ್ಟಣದ ಚನ್ನಬಸವೇಶ್ವರ ಕಾಲೋನಿಯ ಸಂತೋಷ್​​ ದ್ಯಾಡಂಗಲೆ ಎಂಬಾತ ತನ್ನ ಮನೆಯಲ್ಲಿ 2 ಕ್ವಿಂಟಲ್ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ನರಸಿಂಗ್ ತುಳಸಿರಾಮ್ ಮಾನೆ, ಸಂತೋಷ್​ ದಡ್ಯಾಂಗಲೆ, ಶಿವಕುಮಾರ್ ದಡ್ಯಾಂಗಲೆ ಹಾಗೂ ಅಶೋಕ ರಾಚಪ್ಪ ಹೆಳವಾ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ‌.ಎಲ್. ಅವರ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ದೇವರಾಜ್ ಬಿ, ಸಿಪಿಐ ರಾಘವೇಂದ್ರ ಹಾಗೂ ಸಂತಪೂರ್ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್​ಐ ಸುವರ್ಣ ಅವರ ನೇತೃತ್ವದಲ್ಲಿ ಸಿಬ್ಬದಿ ದಾಳಿ ಮಾಡಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details