ಕರ್ನಾಟಕ

karnataka

ಬಳ್ಳಾರಿ ಕೋರ್ಟ್​ಗೆ ಜನಾರ್ದನ ರೆಡ್ಡಿ ಹಾಜರ್​... ಅಯ್ಯಪ್ಪನ ಮಾಲೆ ಧರಿಸಿ ಬಂದ ಶ್ರೀರಾಮುಲು

By

Published : Jun 17, 2019, 7:01 PM IST

Updated : Jun 17, 2019, 10:22 PM IST

ಮಾಜಿ ಸಚಿವ ಎಂ.ದಿವಾಕರ್​ ಬಾಬು ಅವರ ವಿರುದ್ಧ ಅವಹೇಳನಕಾರಿಯಾದ ವರದಿಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಸುಪ್ರೀಂಕೋರ್ಟ್ ಬಳ್ಳಾರಿ ಪ್ರವೇಶ ನಿರ್ಬಂಧ ಹೇರಿದ್ದರಿಂದ ಇಷ್ಟು ದಿನ ಕೋರ್ಟ್​ಗೆ ಹಾಜರಾಗಿರಲಿಲ್ಲ. ಇಂದು ರೆಡ್ಡಿ, ಶ್ರೀರಾಮುಲು ಸೇರಿದಂತೆ ನಾಲ್ವರು ಕೋರ್ಟ್​ಗೆ ಹಾಜರಾಗಿದ್ದರು.

ಕೋರ್ಟಿಗೆ ಹಾಜರಾಗಿದ್ದ ಜನಾರ್ದನರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಎಂ. ದಿವಾಕರ್​​ ಬಾಬು ಅವರ ಮಾನನಷ್ಟ ಪ್ರಕರಣದ ವಿಚಾರಣೆ ಹಿನ್ನಲೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯಕ್ಕೆ (ಜೆಎಂಎಫ್ಸಿ) ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹಾಜರಾಗಿದ್ದರು.

ಕೆಂಪು ಬಣ್ಣದ ಅಂಗಿಯನ್ನುಟ್ಟಿದ್ದ ಜನಾರ್ದನ ರೆಡ್ಡಿ ಹಾಗೂ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಶಾಸಕ ಬಿ. ಶ್ರೀರಾಮುಲು ತಮ್ಮ ವಕೀಲರೊಂದಿಗೆ ನ್ಯಾಯಾಧೀಶರ ಮುಂದೆ ಹಾಜರಾದರು.

ಬಳ್ಳಾರಿ ಕೋರ್ಟ್​ಗೆ ಜನಾರ್ದನ ರೆಡ್ಡಿ ಹಾಜರ್

ಮಾಜಿ ಸಚಿವ ಎಂ. ದಿವಾಕರ್​ ಬಾಬು ಅವರ ವಿರುದ್ಧ ಅವಹೇಳನಕಾರಿಯಾದ ವರದಿಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ಈ ನಮ್ಮ ಕನ್ನಡನಾಡು ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಸುಪ್ರೀಂಕೋರ್ಟ್ ಬಳ್ಳಾರಿ ಪ್ರವೇಶ ನಿರ್ಬಂಧ ಹೇರಿದ್ದರಿಂದ ಇಷ್ಟು ದಿನ ಕೋರ್ಟ್​ಗೆ ಹಾಜರಾಗಿರಲಿಲ್ಲ. ಇಂದು ರೆಡ್ಡಿ, ಶ್ರೀರಾಮುಲು ಸೇರಿ ನಾಲ್ವರು ಹಾಜರಾಗಿದ್ದಾರೆ.

ಸದ್ಯ ಈ ಪ್ರಕರಣವನ್ನು ಬೆಂಗಳೂರಿನ ಕೋರ್ಟಿಗೆ ಹಸ್ತಾಂತರ ಮಾಡಲಾಗಿದೆ. ಇದೊಂದು ಪ್ರಕರಣ ಕೋರ್ಟಿನಲ್ಲಿತ್ತು. ಕೋರ್ಟ್ ಆದೇಶದ ಹಿನ್ನೆಲೆ ಹಾಜರಾಗಿದ್ದೇನೆ ಎಂದು ಜರ್ನಾದನರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

Last Updated : Jun 17, 2019, 10:22 PM IST

TAGGED:

ABOUT THE AUTHOR

...view details