ಕರ್ನಾಟಕ

karnataka

ಹೊಸಪೇಟೆ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್​ ಸವಾರ ಸಾವು

By

Published : Nov 4, 2020, 3:16 PM IST

ಹೊಸಪೇಟೆ ತಾಲೂಕಿನ ಪಾಪಿನಾಯಕ‌ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಗಾಲಿಗೆ ಸಿಲುಕಿ ಜೀವಕಳೆದುಕೊಂಡಿದ್ದಾನೆ.

accedent
ಅಪಘಾತ

ಹೊಸಪೇಟೆ:ತಾಲೂಕಿನ ಪಾಪಿನಾಯಕ‌ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಚಕ್ರದೊಳಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೊಸಪೇಟೆ ನಗರ ನಿವಾಸಿ ಹಾಗೂ ಜಿಂದಾಲ್ ನೌಕರ ಆಂಜನೇಯ(30) ಮೃತ ಬೈಕ್​ ಸವಾರ. ಈತ ಎಂದಿನಂತೆ ಜಿಂದಾಲ್ ಕಾರ್ಖಾನೆಗೆ ಕೆಲಸಕ್ಕೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗಾದಿಗನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details