ಕರ್ನಾಟಕ

karnataka

ಮಂತ್ರಿಮಂಡಲದಲ್ಲಿ ಯುವಕರಿಗೆ ಅವಕಾಶ ನೀಡಿ: ಉಮೇಶ ಕತ್ತಿ ಒತ್ತಾಯ

By

Published : Oct 5, 2020, 8:18 PM IST

ಪಕ್ಷದಲ್ಲಿ ನಾನೊಬ್ಬ ಹಿರಿಯ ಶಾಸಕನಾದರೂ ಕೂಡ ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಶಾಸಕ ಉಮೇಶ ಕತ್ತಿ ತಿಳಿಸಿದ್ದಾರೆ.

umesh katti
ಉಮೇಶ ಕತ್ತಿ

ಚಿಕ್ಕೋಡಿ : ನಾನು ಪಕ್ಷದಲ್ಲಿ ಹಿರಿಯ ಶಾಸಕನಾಗಿ ಕೆಲಸ ಮಾಡುತ್ತೇನೆ. ಮಂತ್ರಿಮಂಡಲದಲ್ಲಿ ಯುವಕರಿಗೆ ಸಚಿವ ಸ್ಥಾನಕ್ಕಾಗಿ ಅವಕಾಶ ನೀಡಿ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಉಮೇಶ ಕತ್ತಿ ಮಾತನಾಡಿದರು

ಚಿಕ್ಕೋಡಿ ಪಟ್ಟಣದ ಬಾಬು ಜಗಜೀವನರಾವ್​ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ನನ್ನ ರಾಜಕೀಯ ಜೀವನದಲ್ಲಿ 13 ವರ್ಷಗಳ ಕಾಲ ಮಂತ್ರಿಮಂಡಲದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಸದ್ಯ ನಾನು ಬಿಜೆಪಿ ಪಕ್ಷದಲ್ಲಿ ಒಬ್ಬ ಹಿರಿಯ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.

ಸದ್ಯ ಇರುವ ಮಂತ್ರಿಮಂಡಲದಲ್ಲಿ ಯುವಕರಿಗೆ ಸಚಿವ ಸ್ಥಾನಕ್ಕಾಗಿ ಅವಕಾಶವನ್ನು ನೀಡುತ್ತೇನೆ ಹಾಗೂ ಪಕ್ಷದಲ್ಲಿ ನಾನೊಬ್ಬ ಹಿರಿಯ ಶಾಸಕರಾದರೂ ಕೂಡ ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದ ಅವರು, ನಾನು ಬಿಜೆಪಿ ಪಕ್ಷದ ಒಬ್ಬ ಶಾಸಕನಾಗಿ ಕಾರ್ಯಕರ್ತನಾಗಿ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details