ಕರ್ನಾಟಕ

karnataka

ಕಸ ವಿಲೇವಾರಿ ಮಾಡುವ ಟಿಪ್ಪರ್ ಡಿವೈಡರ್‌ಗೆ ಡಿಕ್ಕಿ: ಪೌರ ಕಾರ್ಮಿಕ ಸಾವು

By

Published : Jul 19, 2020, 3:12 PM IST

ಕಸ ವಿಲೇವಾರಿ ಮಾಡುವ ಟಿಪ್ಪರ್ ಲಾರಿ ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಪೌರ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Civil labor Death on the spot
ಟಿಪ್ಪಿರ್ ಡಿವೈಡರ್​ ಗೆ ಡಿಕ್ಕಿ: ಪೌರ ಕಾರ್ಮಿಕ ಸ್ಥಳದಲ್ಲೇ ಸಾವು

ಬೆಳಗಾವಿ: ಕಸ ತುಂಬಿಕೊಂಡು ಹೊರಟಿದ್ದ ಟಿಪ್ಪರ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಪೌರ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಾಂಧಿನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಪೌರ ಕಾರ್ಮಿಕ ಸಾವು

ಜ್ಯೋತಿ ನಗರದ ನಿವಾಸಿ ಜಿತೇಂದ್ರಬಾಬು ಢಾವಾಳೆ (35) ಸಾವನ್ನಪ್ಪಿದ ಪೌರ ಕಾರ್ಮಿಕ. ಕಸ ವಿಲೇವಾರಿ ಮಾಡುವ ಟಿಪ್ಪರ್ ಲಾರಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದೊಳಗಿದ್ದ ವಾಹನ ಚಾಲಕ ಟಿಪ್ಪರ್​ನಿಂದ ಕೆಳಗಡೆ ಬಿದ್ದಿದ್ದಾನೆ. ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಜಿತೇಂದ್ರ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಜಿಲ್ಲಾಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮೃತ ಪೌರ ಕಾರ್ಮಿಕನ ಐಡಿ ಕಾರ್ಡ್

ABOUT THE AUTHOR

...view details