ಬೆಂಗಳೂರು/ಬೆಳಗಾವಿ: ಮತದಾರರ ಮಾಹಿತಿ ಕಳ್ಳತನಕ್ಕೂ ಕುಕ್ಕರ್ ಬ್ಲಾಸ್ಟ್ಗೂ ಸಂಬಂಧ ಕಲ್ಪಿಸಬೇಡಿ ಎಂದು ಸಿಎಂ ಬೊಮ್ಮಾಯಿ ಡಿಕೆಶಿಗೆ ಮನವಿ ಮಾಡಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಭಯೋತ್ಪಾದನೆ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಅವರು, ವೋಟ್ ಕದಿಯುವಂತದ್ದು, ಇಲ್ಲದವರನ್ನು ಸೇರಿಸುವುದು, ಬೇಡದವರನ್ನು ತೆಗೆಯುವುದು ನಮ್ಮ ಪಕ್ಷದ ಸಂಸ್ಕೃತಿಯಲ್ಲ ಎಂದರು.
ಮುಂದುವರೆದು ಮಾತನಾಡಿ, ಇದು ಇವತ್ತಿನಿಂದ ನಡೆದಿದ್ದಲ್ಲ. ಬಿಲ್ಓಗಳ ನೇಮಕಕ್ಕೆ ನಾವು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಆ ಸಂಸ್ಥೆಗೆ ಸ್ವೀಪ್ ಮಾಡಲು 2017ರಲ್ಲಿ ಅಧಿಕಾರ ಕೊಡಲಾಗಿತ್ತು. ಅವರ ಸರ್ಕಾರ ಇದ್ದಾಗಲೇ ಕೊಟ್ಟಿತ್ತು. ತನಿಖೆ ನಡೆಯುತ್ತಿದೆ. ಎಲ್ಲವೂ ಹೊರಗೆ ಬರಲಿ ಎಂದು ಹೇಳಿದರು.