ಕರ್ನಾಟಕ

karnataka

ಜೊಮ್ಯಾಟೋ ಡೆಲಿವರಿ ಬಾಯ್ ಪರ ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ ಬ್ಯಾಟಿಂಗ್

By

Published : Mar 13, 2021, 3:34 PM IST

ಕಾಮರಾಜ್ ಪರವಾಗಿ ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್​ಬುಕ್​ನಲ್ಲಿ ಲೈವ್ ಬಂದಿದ್ದು, ಕಾಮರಾಜ್​ಗೆ ಧೈರ್ಯ ತುಂಬಿದ್ದಾರೆ.

ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ  ಬ್ಯಾಟಿಂಗ್
ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ ಬ್ಯಾಟಿಂಗ್

ಬೆಂಗಳೂರು:ಮಹಿಳೆ‌ ಮೇಲೆ ಹಲ್ಲೆ‌ ಪ್ರಕರಣ ಸಂಬಂಧ ಜೊಮ್ಯಾಟೋದ ಫುಡ್ ಡೆಲಿವರಿ ಬಾಯ್ ಕಾಮರಾಜ್ ಸಾಮಾಜಿಕ ಜಾಲತಾನದಲ್ಲಿ ಕಣ್ಣೀರು ಸುರಿಸಿದ್ದಾರೆ.

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣನೊಂದಿಗೆ ಡೆಲಿವರಿ ಆರಂಭದಿಂದ ಹಿಡಿದು ಕೊನೆವರೆಗೂ ಏನೆಲ್ಲಾ ಆಯಿತು ಎಂಬುದರ ಬಗ್ಗೆ ಮಾತನಾಡಿರುವ ಕಾಮರಾಜ್​ ಕಣ್ಣೀರು ಸುರಿಸಿದ್ದಾರೆ‌‌. ಮಾ.10 ರಂದು ಹೆಚ್​ಎಸ್ಆರ್ ಲೇಔಟ್ ರೆಸ್ಟೋರೆಂಟ್​ನಿಂದ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರು ಬಳಿ ಅಪಾರ್ಟ್ಮೆಂಟ್ ನಿವಾಸಕ್ಕೆ ಫುಡ್ ತಲುಪಿಸಲು ಆರ್ಡರ್ ಬಂದಿತ್ತು. ಬೇಗೂರು, ಬೊಮ್ಮನಹಳ್ಳಿ‌ ಮಾರ್ಗವಾಗಿ ಹೋಗಿದ್ದರಿಂದ ರಸ್ತೆ ಕಾಮಗಾರಿ ಹಾಗೂ ಟ್ರಾಫಿಕ್ ಹೆಚ್ಚಾಗಿದ್ದರಿಂದ ನಿಗದಿತ ಸಮಯದೊಳಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.‌

ಈ ಬಗ್ಗೆ ಹಿತೇಶಾ ಚಂದ್ರಾಣಿ ಎಂಬುವರ ಬಳಿ ಕ್ಷಮೆ ಕೇಳಿದರೂ ನನ್ನ ಮೇಲೆ ಕಿಡಿಕಾರಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಮಹಿಳೆ ಮತ್ತು ನನ್ನ ನಡುವೆ ಜಗಳವಾಯಿತು. ಚಪ್ಪಲಿ ಕೈಗೆತ್ತಿಕೊಂಡು ನನ್ನ ಮೇಲೆ‌ ಎಸೆದಿದ್ದರು ಎಂದು ಕಾಮರಾಜ್ ವಿಡಿಯೋದಲ್ಲಿ ವಿವರಿಸಿದ್ದಾನೆ.

ಕಾಮರಾಜ್ ಪರವಾಗಿ ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್​ಬುಕ್​ನಲ್ಲಿ ಲೈವ್ ಬಂದಿದ್ದು, ಕಾಮರಾಜ್​ಗೆ ಧೈರ್ಯ ತುಂಬಿದ್ದಾರೆ.

ABOUT THE AUTHOR

...view details