ಕರ್ನಾಟಕ

karnataka

ಒತ್ತುವರಿ ಸರ್ವೇ ಕಾರ್ಯ ಮತ್ತಷ್ಟು ಚುರುಕು: ತುಷಾರ್ ಗಿರಿನಾಥ್

By

Published : Oct 6, 2022, 9:00 PM IST

ಇಂದು ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಭೆ ನಡೆಸಲಾಗಿದ್ದು, ಸೋಮವಾರದಿಂದ ಮತ್ತೆ ಡೆಮಾಲಿಷನ್ ಡ್ರೈವ್ ಆರಂಭವಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

KN_BNG_06_T
ತುಷಾರ್​ ಗಿರಿನಾಥ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸರ್ವೇ ಕಾರ್ಯ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಸರ್ವೆ ಕಾರ್ಯ ನಡೆಸಲಾಗುತ್ತದೆ. ಸೋಮವಾರದಿಂದ ಮತ್ತೆ ಡೆಮಾಲಿಷನ್ ಡ್ರೈವ್ ಆರಂಭವಾಗುತ್ತದೆ ಎಂದರು.

ಮಹದೇವಪುರದಿಂದಲೇ ಒತ್ತುವರಿ ತೆರವು ಆರಂಭ:ಮೊದಲು ಮಹದೇವಪುರದಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗುತ್ತದೆ. ಪ್ರಾಮುಖ್ಯತೆ ಆಧಾರದ ಮೇಲೆ ತೆರವು ಕಾರ್ಯಾಚರಣೆ ಮಾಡಲಾಗುವುದು. ಇನ್ನೂ ಸರ್ವೆಯರ್​ಗಳು ಸರ್ವೆ ನಡೆಸಿ ವರದಿ ನೀಡುತ್ತಾರೆ ಎಂದು ಹೇಳಿದರು.

ಮುಲಾಜಿಲ್ಲದೇ ಒತ್ತುವರಿ ತೆರವು:ಸರ್ವೇ ವರದಿ ಕೈ ಸೇರುತ್ತಿದ್ದಂತೆ ತೆರವು ಆರಂಭ ಮಾಡುತ್ತೇವೆ. ಯಾವುದೇ ಮುಲಾಜಿಲ್ಲದೇ ಒತ್ತುವರಿ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ರಾಜಕಾಲುವೆ ಒತ್ತುವರಿ ತೆರವು ಮಾಡದಿದ್ದಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು: ಬಿಬಿಎಂಪಿಗೆ ಹೈಕೋರ್ಟ್​ ಎಚ್ಚರಿಕೆ

ABOUT THE AUTHOR

...view details