ಕರ್ನಾಟಕ

karnataka

ನೋಟಿಸ್ ನೀಡಿದ ಬಳಿಕವೂ ಸಂಚರಿಸುವ ಓಲಾ, ಉಬರ್, ಆಟೋ ಜಪ್ತಿಗೆ ಸೂಚನೆ: ಸಚಿವ ಶ್ರೀರಾಮುಲು

By

Published : Oct 8, 2022, 2:24 PM IST

ನೋಟಿಸ್ ಕೊಟ್ಟ ಬಳಿಕವೂ ಸಂಚಾರ ಸೇವೆ ಮಾಡುತ್ತಿದ್ದರೆ, ಅಂತಹ ವಾಹನ ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.- ಸಚಿವ ಶ್ರೀರಾಮುಲು.

Minister B Sriramulu
ಸಚಿವ ಶ್ರೀರಾಮುಲು

ಬೆಂಗಳೂರು:ನೋಟಿಸ್ ನೀಡಿದ ಬಳಿಕವೂ ಸಂಚಾರ ನಡೆಸುತ್ತಿರುವ ಓಲಾ, ಉಬರ್ ಆಟೋವನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದರು.

ವಿಧಾನ ಸೌಧದಿಂದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು. ತಾಂತ್ರಿಕ ಕಾರಣದಿಂದ ನೋಟಿಸ್ ನೀಡಲಾಗಿತ್ತು. ಪರವಾನಿಗೆ ಷರತ್ತು ಉಲ್ಲಂಘನೆ ಮಾಡಬಾರದು. ಪರವಾನಿಗೆ ಷರತ್ತು ಉಲ್ಲಘಿಸಿದ ಕಾರಣ ನೋಟಿಸ್ ನೀಡಲಾಗಿದೆ. ಅವರಿಗೆ ಸ್ಪಷ್ಟನೆ ನೀಡಲು ಹೇಳಲಾಗಿದೆ ಎಂದರು.

ಸಚಿವ ಶ್ರೀರಾಮುಲು

ನೋಟಿಸ್ ಕೊಟ್ಟ ಬಳಿಕವೂ ಸಂಚಾರ ಸೇವೆ ಮಾಡುತ್ತಿದ್ದರೆ, ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ

ABOUT THE AUTHOR

...view details